ಸುಬ್ರಹ್ಮಣ್ಯ ಪೊಲೀಸರ ಕಾರ್ಯಾಚರಣೆ – ಕಳುವಾಗಿದ್ದ ಮೊಬೈಲ್‌ ಗಳ ಪತ್ತೆ- ವಾರಿಸುದಾರರಿಗೆ ಹಸ್ತಾಂತರ

0

ಪುತ್ತೂರು: ಬೇರೆ ಬೇರೆ ಸಂದರ್ಭಗಳಲ್ಲಿ ದಾಖಲಾದ ಮೊಬೈಲ್ ಕಳವು ಪ್ರಕರಣದ ಬೆನ್ನು ಹತ್ತಿದ ಸುಬ್ರಹ್ಮಣ್ಯ ಪೊಲೀಸರು 6 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಹ್ಮಣ್ಯ ಠಾಣೆಯ ಎಸ್.ಐ. ಕಾರ್ತಿಕ್ ನೇತೃತ್ವದ ತಂಡ ಠಾಣೆಯಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣಗಳ ಬೆನ್ನು ಹತ್ತಿ ಲೊಕೇಶನ್ ಆಧಾರದಲ್ಲಿ ಪತ್ತೆ ಹಚ್ಚಿ ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here