ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ- ವೈದ್ಯರ ನೇಮಕದ ಭರವಸೆ

0

ಕಾಣಿಯೂರು: ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕಿ .ಕು.ಭಾಗೀರಥಿ ಮುರುಳ್ಯ ಅ.30ರಂದು ಭೇಟಿ ನೀಡಿದರು. ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.


ಆಸ್ಪತ್ರೆಯಲ್ಲಿ ಖಾಯಂ ವೈದ್ಯರ ಸಮಸ್ಯೆ ಇದ್ದು ಇದನ್ನು ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದರು. ವೈದ್ಯರ ನೇಮಕದ ಬಗ್ಗೆ ಮಂತ್ರಿಗಳಿಗೆ ತಿಳಿಸುವುದಾಗಿ ಹೇಳಿದರು. ಆಸ್ಪತ್ರೆಯ ಜೀಪು ದುಸ್ಥಿತಿಯಲ್ಲಿದ್ದು ಬೇರೆ ಜೀಪನ್ನು ಒದಗಿಸಬೇಕೆಂದು ಶಾಸಕರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀನಾಥ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ, ಪಿಡಿಒ ಪ್ರವೀಣ್, ಜಯರಾಮ ಉಮಿಕ್ಕಳ, ಪ್ರೇಮಚಂದ್ರ ಬೆಳ್ಳಾರೆ, ಮುರಳಿ ತಡಗಜೆ, ದಿನೇಶ್ಚಂದ್ರ ಹೆಗ್ಡೆ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here