ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿದ್ದ ಆರೋಪಿ- ಕಾಸರಗೋಡಿನಲ್ಲಿ ಬಂಧಿಸಿದ ಕಡಬ ಪೊಲೀಸರು

0

ಕಡಬ: ಪ್ರಕರಣವೊಂದರಲ್ಲಿ ಆರೋಪಿಯಾಗಿ ಪುತ್ತೂರು ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿದ್ದ ತಲಪಾಡಿಯ ವ್ಯಕ್ತಿಯನ್ನು ಕಡಬ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ.
ಮಂಗಳೂರು ತಲಪಾಡಿ ನಿವಾಸಿ ಅಬ್ದುಲ್ಲ ಎಂಬವರ ಮಗ ಅಶ್ರಫ್ ಯಾನೆ ಬಾಕುರು ಆಶ್ರಫ್ ಎಂಬವರು ಬಂಧಿತ ವ್ಯಕ್ತಿ. ಇವರು ಸುಮಾರು 17 ವರ್ಷಗಳಿಂದ ತಲೆ ಮರಿಸಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿ ಬಿ ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಕಡಬ ಠಾಣಾ ಪಿ.ಎಸ್.ಐ. ಅಭಿನಂದನ್ ನಿರ್ದೇಶನದಂತೆ ತನಿಖಾ ಪಿಎಸ್ಐ ಅಕ್ಷಯ್ ಹಾಗೂ ಠಾಣಾ ವಾರೆಂಟ್ ಟೀಮ್ ಕಾಸರಗೋಡಿನಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ವಾರೆಂಟ್ ವ್ಯಕ್ತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಅಶ್ರಫ್ ವಿರುದ್ದಕಾಸರಗೋಡು ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ.

LEAVE A REPLY

Please enter your comment!
Please enter your name here