ಕರಿಮಾಂಕಲ್ ಶ್ರೀ ಜಾನ್ ಈಶೋರವರ ಸ್ಮರಣಾರ್ಥ- ಕುಟುಂಬಸ್ಥರಿಂದ ಕಡಬ ತಾಲೂಕು ಆಡಳಿತ ಸೌಧಕ್ಕೆ ಉದ್ಯಾನವನ ಕೊಡುಗೆ:ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ

0

ಕಡಬ: ಕರಿಮಾಂಕಲ್ ಶ್ರೀ ಜಾನ್ ಈಶೋರವರ ಸ್ಮರಣಾರ್ಥ ಕಡಬ ತಾಲೂಕು ಆಡಳಿತ ಸೌಧಕ್ಕೆ ಡಾ. ಅನಿಲ್ ಈಶೋ ಹಾಗೂ ಸುನಿಲ್ ಈಶೋ ಲಂಡನ್ ಹಾಗೂ ಕುಟುಂಬಸ್ಥರು ಅವರು ಉದ್ಯಾನವನ ನಿರ್ಮಿಸಿ ಕೊಡುಗೆ ,ಉದ್ಯಾನವನಕ್ಕೆ ಹನಿ ನೀರಿನ ವ್ಯವಸ್ಥೆಯನ್ನು ಥೋಮಸ್ ಚೆನೈ ಅವರು ಕೊಡುಗೆ ನೀಡಿದ್ದು ಇದನ್ನು ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಅವರು ನ.1ರಂದು ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅನಿಲ್ ಈಶೋ, ಸುನಿಲ್ ಈಶೋ ಲಂಡನ್ ಹಾಗೂ ತಹಸೀಲ್ದಾರ್ ಪ್ರಭಾಕರ್ ಖಜೂರೆ, ಉಪ ತಹಸೀಲ್ದಾರುಗಳಾದ ಗೋಪಾಲ್ ಕಲ್ಲುಗುಡ್ಡೆ, ಮನೋಹರ್ ಕೆ.ವಿ. ಸೈಯದುಲ್ಲಾಖಾನ್ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here