ಸವಣೂರು ಗ್ರಾ.ಪಂ‌.ವತಿಯಿಂದ ಕನ್ನಡ ರಾಜ್ಯೋತ್ಸವ ,ರಾಣಿ ಅಬ್ಬಕ್ಕ ವೃತ್ತಕ್ಕೆ ಪುಷ್ಪಾರ್ಚನೆ

0

ಸವಣೂರು : ಸವಣೂರು ಗ್ರಾ.ಪಂ.ವತಿಯಿಂದ ಸವಣೂರು ಜಂಕ್ಷನ್‌ನಲ್ಲಿರುವ ರಾಣಿ ಅಬ್ಬಕ್ಕ ಸರ್ಕಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಸರ್ಕಲ್‌ಗೆ ಪುಷ್ಪಾರ್ಚನೆ ಮಾಡಲಾಯಿತು. ಗಾಯಕಿ ಗುರುಪ್ರಿಯಾ ನಾಯಕ್ ಅವರು ಕನ್ನಡ ನಾಡಿನ ಹಿರಿಮೆಯ ಹಾಡುಗಳನ್ನು ಹಾಡಿದರು.ಸವಣೂರು ಗ್ರಾ.ಪಂ.ಅಧ್ಯಕ್ಷೆ  ಸುಂದರಿ ಬಿ.ಎಸ್, ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ ಹಾಗೂ ಗ್ರಾ.ಪಂ.ಸದಸ್ಯರು ,ಸಿಬ್ಬಂದಿಗಳು,ಸವಣೂರಿನ ವರ್ತಕರು ,ಯುವಕ ಮಂಡಲದ ಸದಸ್ಯರು ,ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ ಸ್ವಾಗತಿಸಿ ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ವಂದಿಸಿದರು.

LEAVE A REPLY

Please enter your comment!
Please enter your name here