ಭವತಿ ಭಿಕ್ಷಾಂದೇಹಿಯಲ್ಲಿ ಸಂಗ್ರಹಿಸಿದ ಧನಸಹಾಯ ಫಲಾನುಭವಿಗಳಿಗೆ ಹಸ್ತಾಂತರ

0

ಪುತ್ತೂರು: ಪಾಣಾಜೆ ಆರ್ಲಪದವು ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್, ಪುತ್ತೂರು ಕಲಾ ಸಿರಿ ಗೊಂಬೆ ಬಳಗ ಮತ್ತು ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ ಇದರ ಎರಡನೇ ವರ್ಷದ ಭವತಿ ಭಿಕ್ಷಾಂದೇಹಿ ಸೇವಾ ಯೋಜನೆಯ ಧನಸಹಾಯವನ್ನು ಎರಡು ಕುಟುಂಬಗಳಿಗೆ ನ. 5 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಸ್ತಾಂತರಿಸಲಾಯಿತು.

ದಸರಾ ಭವತಿ ಭಿಕ್ಷಾಂದೇಹಿ’ ಯಲ್ಲಿ ಸಂಗ್ರಹಿಸಿದ 20,152 ರೂ. ಗಳನ್ನು ಅನಾರೋಗ್ಯದಿಂದುರುವ ಕೇಪುಳು ಮೊಹನ್ ಗೌಡ ರವರ ಪರವಾಗಿ ಅವರ ಪತ್ನಿ ಲಲಿತರಿಗೆ ಹಾಗೂ ಅನಾರೋಗ್ಯದಿಂದಿರುವ ಕಾಣಿಯೂರಿನ ಒಂದೂವರೆ ವರ್ಷದ ಮಗು ಪೂಷಣ್ ರವರ ಪರವಾಗಿ ಅವರ ತಂದೆ ಸೀತಾರಾಮ ಗೌಡ ರವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು‌.ಸಂಘ ಸಂಸ್ಥೆಗಳ ಈ ಸಮಾಜಮುಖಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here