ಬೊಳುವಾರು ಸ.ಹಿ.ಪ್ರಾ.ಶಾಲೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಕಾರ್ಮಿಕ ಇಲಾಖೆ ದ.ಕ ಬ್ಲೋಸ್ಂ ಸಂಘಟನೆ ಮಂಗಳೂರು ಮತ್ತು ಭಾರತ ಕಟ್ಟಡ ಕಾರ್ಮಿಕ ಸಂಘ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರವು ನ.5ರಂದು ಬೊಳುವಾರು ಹಿ ಪ್ರ ಶಾಲೆಯಲ್ಲಿ ನಡೆಯಿತು.


ಭಾರತ್ ಕಟ್ಟಡ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಲೋಕೇಶ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸವಿತಾ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ. ಪ್ರಾಕ್ಸ, ಸಂಘದ ಅಧ್ಯಕ್ಷ ರುಕ್ಮಯ ಗೌಡ, ಕಾರ್ಯಾಧ್ಯಕ್ಷ ಪೌಲ್ ಡಿ ಸೋಜಾ,ಪ್ರ ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಕೋಶಾಧಿಕಾರಿ ಅಹ್ಮದ್ ಬಶೀರ್ ಮತ್ತು ಮಾಜಿ ಅಧ್ಯಕ್ಷ ಇನಾಸ್ ವೇಗಸ್ ಉಪಸ್ಥಿತರಿದ್ದರು. ಪ್ರ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಸ್ವಾಗತಿಸಿ, ಇನಾಸ್ ವೇಗಸ್ ವಂದಿಸಿದರು.

LEAVE A REPLY

Please enter your comment!
Please enter your name here