ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಕಿರಿಯ ವಿಭಾಗದಲ್ಲಿ ಹೊಸಗದ್ದೆ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ನೆಲ್ಯಾಡಿ: ಗೋಳಿತ್ತಟ್ಟು-ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನ.7ರಂದು ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯ ವಿಭಾಗದಲ್ಲಿ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.

  • ಕಿರಿಯ ವಿಭಾಗದ ಕನ್ನಡ ಕಥೆ-ಖತೀಜ ಸಲ್ವ 4ನೇ ದ್ವಿತೀಯ, ಅರೇಬಿಕ್ ಪಠಣ-ಇರ್ಫಾನ್ 3ನೇ ತೃತೀಯ, ಛದ್ಮವೇಷ-ಕೌಶಲ್ 3ನೇ ದ್ವಿತೀಯ, ಅಭಿನಯ ಗೀತೆ-ತ್ರಿಶಾ 3ನೇ ದ್ವಿತೀಯ, ಕನ್ನಡ ಕಂಠಪಾಠ-ಫಾತಿಮತ್ ಆಶಿಮಾ 4ನೇ ತೃತೀಯ, ಕ್ಲೇ ಮಾಡೆಲ್-ರಕ್ಷಿತ್ 3ನೇ ಪ್ರಥಮ ಹಾಗೂ ಭಕ್ತಿಗೀತೆ-ಶ್ರಾವ್ಯ 2ನೇ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
  • ಹಿರಿಯ ವಿಭಾಗದ ಕನ್ನಡ ಕಥೆ-ಕೌಶಿಕಾ 6ನೇ ದ್ವಿತೀಯ, ಅಭಿನಯ ಗೀತೆ-ಜನನಿ 7ನೇ ತೃತೀಯ, ಮಿಮಿಕ್ರಿ-ಪವನ್ 7ನೇ ದ್ವಿತೀಯ, ಧಾರ್ಮಿಕ ಪಠಣ-ದೃತಿ 6ನೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ಮುಖ್ಯಶಿಕ್ಷಕಿ ವಿದ್ಯಾ, ಶಿಕ್ಷಕಿ ಮಾಲತಿ, ಗೌರವ ಶಿಕ್ಷಕಿ ಪವಿತ್ರ, ಅತಿಥಿ ಶಿಕ್ಷಕಿಯರಾದ ಚಿತ್ರಾವತಿ, ಪ್ರಭಾ ಹಾಗೂ ಶಾಲಾ ಪೋಷಕರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here