ಕೊಳ್ತಿಗೆ: ಕೃಷಿತೋಟಕ್ಕೆ ಸಿಡಿಲು ಬಡಿದು ಅಪಾರ ನಷ್ಟ

0

ಪುತ್ತೂರು: ಅಡಿಕೆ ಕೃಷಿ ತೋಟಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಕೊಳ್ತಿಗೆಯಲ್ಲಿ ನಡೆದಿದೆ. ಕೊಳ್ತಿಗೆ ಗ್ರಾಮದ ಕೆಳಗಿನಮನೆ ವಿಶ್ವನಾಥ ರೈ ಎಂಬವರ ಅಡಿಕೆ ತೋಟಕ್ಕೆ ನ.2 ರಂದು ಸಂಜೆ ಸಿಡಿಲು ಬಡಿದು ಸುಮಾರು 75 ಕ್ಕೂ ಅಧಿಕ ಅಡಿಕೆ ಮರ, 1 ತೆಂಗಿನ ಮರ ಹಾಗೂ ಸುಮಾರು 26 ಕ್ಕೂ ಅಧಿಕ ಬಾಳೆ ಗಿಡ ಸುಟ್ಟು ಹೋಗಿದೆ. ಇದಲ್ಲದೆ ಕೃಷಿ ಪಂಪು ಶೆಡ್‌ಗೂ ಹಾನಿಯಾಗಿದ್ದು ವಿದ್ಯುತ್ ವಯರ್, ಮೀಟರ್ ಸಂಪೂರ್ಣ ಹಾಳಾಗಿದೆ. ಘಟನೆಯಿಂದ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ವಿಶ್ವನಾಥ ರೈ ತಿಳಿಸಿದ್ದು ಈ ಬಗ್ಗೆ ಕೊಳ್ತಿಗೆ ಗ್ರಾಮ ಆಡಳಿತ ಅಧಿಕಾರಿಯವರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕೊಳ್ತಿಗೆ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಗ್ರಾಪಂ ಸದಸ್ಯ ವಸಂತ ಕುಮಾರ್ ರೈ ದುಗ್ಗಳ ಭೇಟಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here