ಸುಬ್ರಹ್ಮಣ್ಯ :ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಕುಮಾರಪರ್ವತ ಚಾರಣ

0

ಸುಬ್ರಹ್ಮಣ್ಯ, ನ. 8: ಉಡುಪಿ ಸೋದೆ ಮಠದ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಸುಬ್ರಹ್ಮಣ್ಯದ ಕುಮಾರಪರ್ವತಕ್ಕೆ ಚಾರಣ ಯಾತ್ರೆ ನಡೆಸಿದರು.ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಆಗಮಿಸಿದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಜೊತೆ ಕುಶಾಲೋಪರಿ ನಡೆಸಿದರು. 

ಮಾರನೇ ದಿನ ಕೊಡಗಿನ ಸೋಮವಾರಪೇಟೆ ಬಳಿಯ ಹೆಗಡೆಬಾಗಿಲು ಮೂಲಕ ಸುಮಾರು 8 ಕಿ.ಮೀ. ದೂರದ ಕುಮಾರಪರ್ವತ ಚಾರಣ ನಡೆಸಿದರು. ಅಲ್ಲಿಯ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಗಳಿಗೆ ಹಲವು ಚಾರಣ ಪ್ರದೇಶಗಳಿಗೆ  ಚಾರಣ ಕೈಗೊಳ್ಳುವ ಹವ್ಯಾಸದಂತೆ ಕುಮಾರಪರ್ವತ ಚಾರಣ ಕೈಗೊಂಡರು. ಚಾರಣದ ಬಳಿಕ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಉಡುಪಿಯತ್ತ ತೆರಳಿದರು. ಶಿಷ್ಯ ವರ್ಗದವರು ಜತೆಗಿದ್ದರು.

LEAVE A REPLY

Please enter your comment!
Please enter your name here