ಕುಂಡಾಜೆ: ಸಿಡಿಲು ಬಡಿದು ಮನೆಗೆ ವ್ಯಾಪಕ ಹಾನಿ

0

ರಾಮಕುಂಜ: ಸಿಡಿಲು ಬಡಿದು ಮನೆ ಭಾಗಶಃ ಹಾನಿಗೊಂಡಿರುವ ಘಟನೆ ರಾಮಕುಂಜ ಗ್ರಾಮದ ಕುಂಡಾಜೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಕುಂಡಾಜೆ ನಿವಾಸಿ ಕೂಲಿ ಕಾರ್ಮಿಕ ಉಮ್ಮರ್ ಎಂಬವರ ಮನೆಗೆ ಸಿಡಿಲು ಬಡಿದು ವ್ಯಾಪಕ ಹಾನಿ ಆಗಿದೆ. ಮನೆಯ ಮುಂಭಾಗದ ತೆಂಗಿನ ಮರವು ಸಿಡಿಲು ಬಡಿದ ಹಾನಿಯಾಗಿದೆ. ಮನೆಯ ವಯರಿಂಗ್, ಗೋಡೆ, ವಾಷಿಂಗ್ ಮೆಷಿನ್ ಸೇರಿದಂತೆ ಇತರೇ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಂಡಿವೆ. ಸುಮಾರು 3.50 ಲಕ್ಷ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಉಮ್ಮರ್ ಹಾಗೂ ಅವರ ಪತ್ನಿ, ಮಗಳು ನಿನ್ನೆ ರಾತ್ರಿ ಪಕ್ಕದ ಸಂಬಂಧಿಕರ ಮನೆಗೆ ಮಲಗಲುಹೋಗಿದ್ದು ಮನೆಯಲ್ಲಿ ಯಾರೂ ಇರಲಿಲ್ಲ. ಉಮ್ಮರ್ ಅವರು ಬೆಳಿಗ್ಗೆ ಮನೆಗೆ ಬಂದ ವೇಳೆ ಸಿಡಿಲು ಬಡಿದು ಮನೆ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.
ಹಾನಿಗೊಂಡ ಮನೆಗೆ ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ , ಸದಸ್ಯರಾದ ಪ್ರಶಾಂತ್ ಆರ್ ಕೆ., ಯತೀಶ್ ಬಾನಡ್ಕ, ಪಿಡಿಒ ಲಲಿತಾ, ಗ್ರಾಮ ಆಡಳಿತಾಧಿಕಾರಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here