ಬಾಳಿಲ ವಿದ್ಯಾಬೋಧಿನೀ ಶಾಲಾ ವತಿಯಿಂದ ಭತ್ತ ಕಟಾವು ಕಾರ್ಯಕ್ರಮ

0

ತೆನೆ ಹೊತ್ತು ಸಂಭ್ರಮಿಸಿದ ಮಕ್ಕಳು…

ಕಾಣಿಯೂರು: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಪ್ರತೀ ವರ್ಷ ವಿಭಿನ್ನ ರೀತಿಯ ಶೈಕ್ಷಣಿಕ ಚಟುವಟಿಕೆ ಕೈಗೊಂಡು ಜಿಲ್ಲೆಯಲ್ಲಿಯೇ ಗಮನ ಸೆಳೆಯುತ್ತಿದ್ದು, ಈ ಬಾರಿ ಶಾಲೆಯ ಅಂಗಳದಲ್ಲೆ ಗದ್ದೆ ನಿರ್ಮಾಣ ಮಾಡಿ ಮಕ್ಕಳಿಗೆ ಭತ್ತದ ಬೇಸಾಯದ ಅರಿವು ಮೂಡಿಸಿದೆ.

ಜೂನ್ ತಿಂಗಳಲ್ಲಿ ನೆಟ್ಟ ನೇಜಿ ಕಟಾವಿಗೆ ಬಂದಿದ್ದು, ಕಟಾವು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಎಸ್.ಡಿ. ಎಂ. ಸಿ ಸದಸ್ಯರು, ಪೋಷಕರು, ಶಿಕ್ಷಕರು ಹಾಜರಿದ್ದು. ಮಕ್ಕಳಿಗೆ ಕೃಷಿ ಪಾಠ ತಿಳಿಸಿದರು. ಊರಿನ ಹಿರಿಯ ವಿಶ್ವನಾಥ ಮೂಲೆ ಮಜಲು ಕಾಟವು ಕಾರ್ಯಕ್ಕೆ ಮುನ್ನುಡಿ ಹಾಕಿದರು. ಮಕ್ಕಳು ಕಟಾವು ಮಾಡಿ ತೆನೆ ಹೊತ್ತು ಭತ್ತದ ಗದ್ದೆಯ ಪ್ರತ್ಯಕ್ಷ ಅನುಭವ ಪಡೆದರು.

LEAVE A REPLY

Please enter your comment!
Please enter your name here