ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ – ಅಧ್ಯಕ್ಷ ತಾರಾನಾಥ ರೈ, ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ

0

ಪುತ್ತೂರು: ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ತಾರಾನಾಥ ರೈ ಬಿ. ಬಾಲ್ಯೊಟ್ಟುಗುತ್ತು ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸೂರಪ್ಪ ಗೌಡ ಪಾಂಗಳಾಯಿ ಆಯ್ಕೆಯಾಗಿದ್ದಾರೆ.

ದೈವಸ್ಥಾನದ ಸಭಾಂಗಣದಲ್ಲಿ ನ.5ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಶಾಂತ್ ಪಾಂಗಳಾಯಿ, ಜತೆ ಕಾರ್ಯದರ್ಶಿಯಾಗಿ ಸುಪ್ರಿತಾ ಸುನಿಲ್ ಪಾಂಗಳಾಯಿ ಹಾಗೂ ಖಜಾಂಚಿಯಾಗಿ ಜಯಶಂಕರ ರೈ ಪಾಂಗಳಾಯಿ ಆಯ್ಕೆಯಾಗಿದ್ದಾರೆ, ಸದಸ್ಯರಾಗಿ ಪುರುಷೋತ್ತಮ ನಾಕ್ ಪಾಂಗಳಾಯಿ, ಪಿ.ಯಸ್ ರಾಜಗೋಪಾಲ ಶಗ್ರಿತ್ತಾಯ ಪಾಂಗಳಾಯಿ, ವಿನಯ ಭಂಡಾರಿ ಪಾಂಗಳಾಯಿ, ಸಂಪತ್ ಕುಮಾರ್ ಪಾಂಗಳಾಯಿ, ಪುರುಷೋತ್ತಮ ನಾಕ್ ಪಾಂಗಳಾಯಿ, ಸರೋಜಿನಿ ಎಸ್ ಅಭಿಕಾರ್ ಪಾಂಗಳಾಯಿ, ಉಮಾಶಂಕರ್ ನಾಕ್ ಪಾಂಗಳಾಯಿ, ಸುರೇಶ್ ನಾಕ್ ಬಾಳೆಪುಣಿ ಪಾಂಗಳಾಯಿ, ಗಂಗಾಧರ ನಾಕ್ ಪಾಂಗಳಾಯಿ, ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್, ಪ್ರೇಮ ಶಿವಪ್ಪ ಗೌಡ ಪಾಂಗಳಾಯಿ, ವಾಸು ಪೂಜಾರಿ ಪಾಂಗಳಾಯಿ, ಪರಮೇಶ್ವರ ನಾಯ್ಕ ವಿದ್ಯಾನಗರ, ದೀಕ್ಷಿತ್ ಕಲ್ಲಿಮಾರ್, ಪ್ರದೀಪ್ ಆಚಾರ್ಯ ಪಾಂಗಳಾಯಿ, ಕರುಣಾಕರ ಆಲೆಟ್ಟಿ ಪಾಂಗಳಾಯಿ, ವೀಣಾ ಪದ್ಮನಾಭ ಆಚಾರ್ಯ ಕಲ್ಲಿಮಾರ್ ಹಾಗೂ ಲಿಂಗಪ್ಪ ಗೌಡ ಕಲ್ಲಿಮಾರ್‌ರವರನ್ನು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here