ಪುತ್ತಿಲ ಪರಿವಾರದ ಕಚೇರಿ ಬಳಿ ತಲ್ವಾರ್ ಪ್ರದರ್ಶಿಸಿ ಬೆದರಿಕೆ ಪ್ರಕರಣ| ದಿನೇಶ್ ಪಂಜಿಗರಿ0ದಲೂ ಪೊಲೀಸರಿಗೆ ದೂರು.

0


ಪುತ್ತೂರು:ಇಲ್ಲಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಯ ಮುಂದೆ ತಲ್ವಾರ್ ಪ್ರದರ್ಶಿಸಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದಿನೇಶ್ ಪಂಜಿಗ ಅವರು ಪುತ್ತಿಲ ಪರಿವಾರದ ಮನೀಶ್ ಕುಲಾಲ್, ಮತ್ತಿತರರ ವಿರುದ್ದ ಪ್ರತಿದೂರು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಬಳಿಕದಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯ ಮುಖಂಡರುಗಳಿಗೆ ಕೆರಳಿಸುವ ರೀತಿಯಲ್ಲಿ ಸಂದೇಶ ಹಾಕುತ್ತಿದ್ದ ವಿಚಾರವನ್ನು ನಾನು ಪ್ರಶ್ನಿಸಿರುವುದಕ್ಕೆ ಮನೀಶ್ ಕುಲಾಲ್‌ರವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಲ್ಲದೆ ಕಚೇರಿಗೆ ಬರುವಂತೆ ತಿಳಿಸಿದಂತೆ ಅಲ್ಲಿಗೆ ಹೋದಾಗ ಅಲ್ಲಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತು ಮನೀಶ್ ಕುಲಾಲ್ ಮತ್ತು ಅವರ ಜೊತೆಗಿದ್ದವರ ವಿರುದ್ದ ಕಾನೂನುಕ್ರಮ ಕೈಗೊಳ್ಳುವಂತೆ ದಿನೇಶ್ ಪಂಜಿಗ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here