ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮನೆಗೆ ಇಸ್ರೋ ವಿಜ್ಞಾನಿಗಳು ಭೇಟಿ

0

ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈಯವರ ಮನೆಗೆ ನ.11ರಂದು ಇಸ್ರೋ ವಿಜ್ಞಾನಿಗಳು ಭೇಟಿ ನೀಡಿದರು.
ನೆಹರು ನಗರ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಇಸ್ರೋ ವಿಕ್ರಮ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇಸ್ರೋದ ಎಲ್‌ಪಿಎಸ್‌ಸಿ ಜನರಲ್ ಮ್ಯಾನೇಜರ್ ಕೃಷ್ಣಮೋಹನ್ ಶಾನ್‌ಭಾಗ್, ಉಪನಿರ್ದೇಶಕ ಶಂಭಯ್ಯ ಮಧ್ಯಾಹ್ನ ದರ್ಬೆಯಲ್ಲಿರುವ ವಾಮನ್ ಪೈಯವರ ಮನೆಗೆ ಭೇಟಿ ಮಧ್ಯಾಹ್ನ ಭೋಜನ ಸವಿದರು. ವಾಮನ್ ಪೈ, ಅವರ ಪತ್ನಿ ಅನುರಾಧ ಪೈ, ಪುತ್ರ ನರಸಿಂಹ ಪೈ, ವಿವೇಕಾನಂದ ಪ.ಪೂ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ., ಪ್ರಾಂಶುಪಾಲ ಮಹೇಶ್, ಉಪ ಪ್ರಾಂಶಯಪಾಲ ದೇವಿಚರಣ್ ರೈ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್, ಕಾರ್ಯದರ್ಶಿ ಮನಮೋಹನ ಎಂ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here