ರಾಮಕುಂಜ: ದೀಪಾವಳಿ ಪ್ರಯುಕ್ತ ಕಾರ್ಮಿಕರಿಗೆ ಅಕ್ಕಿ ವಿತರಣೆ, ಸನ್ಮಾನ

0

ರಾಮಕುಂಜ: ಯಾಕೂಬ್ ಮೇಸ್ತ್ರಿಯವರ ವತಿಯಿಂದ ದೀಪಾವಳಿ ಪ್ರಯುಕ್ತ ಸುಮಾರು 40 ಮಂದಿ ಕೂಲಿಕಾರ್ಮಿಕರಿಗೆ ಉಚಿತವಾಗಿ ಅಕ್ಕಿವಿತರಣೆ ಹಾಗೂ ಹಿರಿಯ ಕಾರ್ಮಿಕರಿಗೆ ಸನ್ಮಾನ, ಸತ್ಕಾರ ಕೂಟ ನ.12ರಂದು ರಾಮಕುಂಜ ಮಹಾವಿದ್ಯಾಲಯದ ಮುಂಭಾಗದ ಇಜ್ಜಾವು ಸುಬ್ರಾಯ ಸಭಾಂಗಣದ ಆವರಣದಲ್ಲಿ ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಕ್ಕಿ ವಿತರಿಸಿ ಶುಭಹಾರೈಸಿದರು. ಅತಿಥಿಗಳಾಗಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ.ಸತೀಶ್ ಭಟ್, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪ ಸುಭಾಸ್ ಶೆಟ್ಟಿ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ್ ಕಟ್ಟಪುಣಿ, ಕಡಬ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಶೇಖರ್, ದುರ್ಗಾಪ್ರಸಾದ್ ಐ.ಎಲ್ ಸುಣ್ಣಾಲ, ನಾಗೇಶ್ ಎನ್.ಸಿ, ಮಂಗಳೂರಿನ ಉದ್ಯಮಿ ನವಾಜ್, ರಾಮಕುಂಜ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ., ಲಕ್ಷ್ಮೀ ನಾರಾಯಣ ರಾವ್ ಆತೂರು, ಸುಭಾಶ್ ಶೆಟ್ಟಿ, ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಸ್ತ್ರಿ ಯಾಕೂಬ್ ನೆಲ್ಯೊಟ್ಟು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮತ್ತು ಉಪಹಾರ, ಸನ್ಮಾನ ಕಾರ್ಯಕ್ರಮಕ್ಕೆ ಸಹಕರಿಸಿದ ಫಾರೂಕ್ ಭೂಮಿಕಾ, ಕೃಷ್ಣಪ್ಪ ಪೂಜಾರಿ ಕಾಜರೊಕ್ಕು, ಸುಂದರ ಕಾಜರೊಕ್ಕು, ಸಿದ್ದಿಕ್‌ರವರನ್ನು ಗೌರವಿಸಿ ಅಭಿನಂದಿಸಲಾಯಿತು. ಸಲೀಂರವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here