ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕ

0


ಗೌರವಾಧ್ಯಕ್ಷ: ಸೀತಾರಾಮ ರೈ ಸವಣೂರು,ಅಧ್ಯಕ್ಷ:ಕರುಣಾಕರ್ ರೈ ದೇರ್ಲ,ಪ್ರ.ಕಾರ್ಯದರ್ಶಿ: ಚಂದ್ರಹಾಸ ರೈ ಬೊಳಿಕ್ಕಳ,ಕೋಶಾಧಿಕಾರಿ: ಉದಯ ವೆಂಕಟೇಶ್, ಪ್ರ.ಸಂಚಾಲಕ: ಪ್ರಶಾಂತ್ ರೈ ಮುಂಡಾಳಗುತ್ತು

ಪುತ್ತೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಸಭೆ ಹಾಗೂ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಘಟಕದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ದರ್ಬೆ ಪ್ರಶಾಂತ್ ಮಹಲ್ ನಲ್ಲಿ ಇತ್ತೀಚೆಗೆ ಜರಗಿತು.
ಗೌರವಾಧ್ಯಕ್ಷರಾಗಿ ಸಹಕಾರ ರತ್ನ ಸವಣೂರು ಸೀತಾರಾಮ ರೈ ಪುನರಾಯ್ಕೆಗೊಂಡಿದ್ದು, ಅಧ್ಯಕ್ಷರಾಗಿ ದರ್ಬೆ ಹೊಟೇಲ್ ಅಶ್ವಿನಿ ಮಾಲಕ ಕರುಣಾಕರ್ ರೈ ದೇರ್ಲ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಬೊಳಿಕ್ಕಳ, ಕೋಶಾಧಿಕಾರಿಯಾಗಿ ಉದಯ ವೆಂಕಟೇಶ, ಪ್ರಧಾನ ಸಂಚಾಲಕರಾಗಿ ಪ್ರಶಾಂತ್ ರೈ ಮುಂಡಾಳಗುತ್ತುರವರು ಆಯ್ಕೆಯಾದರು.
ಉಳಿದಂತೆ ಉಪಾಧ್ಯಕ್ಷರುಗಳಾಗಿ ಡಾ.ಅಶೋಕ್ ಪಡಿವಾಳ್, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಸಮಿತಿ ಸದಸ್ಯರುಗಳಾಗಿ ಎಂ.ಗಂಗಾಧರ ರೈ, ಎಂ.ಆರ್ ಜಯಕುಮಾರ್ ರೈ, ರಾಕೇಶ್ ರೈ ಕೆಡೆಂಜಿ, ದತ್ತಾತ್ರೇಯ ರಾವ್, ಎಂ.ಸಂಕಪ್ಪ ರೈ, ಡಿ.ಗಣೇಶ್ ರೈ, ಸುಬ್ಬಪ್ಪ ಕೈಕಂಬ, ಡಾ|ರಾಜೇಶ್ ಬೆಜ್ಜಂಗಳ, ಅನ್ನಪೂರ್ಣ ರಾವ್, ಶ್ರೀಮತಿ ವಿದ್ಯಾಶ್ರೀ ಎಸ್.‌ ಪಡುಮಲೆ, ಗೌರವ ಸಲಹೆಗಾರರಾಗಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ, ಶಶಿಕುಮಾರ್ ರೈ ಬಾಲ್ಯೊಟ್ಟು, ನೋಣಾಲು ಜೈರಾಜ್ ಭಂಡಾರಿ, ಎ.ಜಗಜ್ಜೀವನ್ ದಾಸ್ ರೈ, ಕೆ.ಎಚ್ ದಾಸಪ್ಪ ರೈ, ಚಂದ್ರಹಾಸ ರೈ ತುಂಬೆಕೋಡಿರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here