ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹಕ್ಕೆ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ಅದ್ಧೂರಿ ಚಾಲನೆ

0

ಸ್ವಾಭಿಮಾನ ಮತ್ತು ನೆಮ್ಮದಿಯ ಬದುಕಿಗಾಗಿ ಸಹಕಾರಿ‌ ವ್ಯವಸ್ಥೆಯ ಪಾತ್ರ ಮಹತ್ವದ್ದು: ಯು. ಟಿ. ಖಾದರ್

ವಿಟ್ಲ: ಸಂಘಟನೆಯಲ್ಲೂ ಸೇವೆಯಲ್ಲೂ ತಾವು ಮುಂದೆ ಎಂಬುದನ್ನು‌ ಮಂಚಿ ಸಹಕಾರಿ‌ ಸಂಘ ತೋರಿಸಿಕೊಟ್ಟಿದೆ, ಸಮಾಜದ ಬೆಳವಣಿಗೆಗೆ ಸಹಕಾರಿ ಕ್ಷೇತ್ರ ಅಗತ್ಯ. ಸ್ವಾಭಿಮಾನ ಮತ್ತು ನೆಮ್ಮದಿಯ ಬದುಕಿಗಾಗಿ ಸಹಕಾರಿ‌ ವ್ಯವಸ್ಥೆಯ ಪಾತ್ರ ಮಹತ್ವದ್ದು. ಮಂಚಿ ಸಹಕಾರ ಸಂಘ ಕಾರ್ಯಕ್ರಮವನ್ನು ಬಹಳಷ್ಟು ವಿಜ್ರಂಭಣೆಯಿಂದ ನಡೆಸಿರುವುದು ತುಂಬಾ ಸಂತಸ ತಂದಿದೆ ಎಂದು ವಿಧಾನಸಭಾ ಅಧ್ಯಕ್ಷರಾದ ಯು. ಟಿ. ಖಾದರ್ ರವರು ಹೇಳಿದರು.

ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ನಿ.) ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ಲಿ.) ಮಂಗಳೂರು ಹಾಗೂ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಮಂಚಿ ಕುಕ್ಕಾಜೆ ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ -2023 ಇದರ ಅಂಗವಾಗಿನ.14ರಂದು ಕುಕ್ಕಾಜೆಯಲ್ಲಿರುವ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆರ್ಥಿಕವಾಗಿರುವ ಚಲನವಲನ ಗ್ರಾಮಾಂತರ ಮಟ್ಟದಲ್ಲಿ ನಡೆಯಲು‌ ಸಹಕಾರಿ ಕ್ಷೇತ್ರ ಪೂರಕ.ಸಹಕಾರಿ‌ ಕ್ಷೇತ್ರ ದೇಶದ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಹಿರಿಯರ ಪರಂಪರೆಯನ್ನು‌ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೂರದರ್ಶಿತ್ವ ಇಟ್ಟುಕೊಂಡು ಸಹಕಾರಿಯನ್ನು ಹುಟ್ಟುಹಾಕಿದ ಹಿರಿಯರನ್ನು ನಾವು ನೆನೆಸಿಕೊಳ್ಳುವುವುದು ಅತೀ ಅಗತ್ಯ ಎಂದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಹಕಾರ ತತ್ವದಲ್ಲಿ ಸಹಕಾರಿ ಬ್ಯಾಂಕುಗಳು ನಡೆಯುತ್ತಿದೆ. ದ.ಕ.ಜಿಲ್ಲೆಯ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹಾನ್ ವ್ಯಕ್ತಿಗಳು ದ.ಕ.ಜಿಲ್ಲೆಯವರು ಎಂದು ಹೇಳಲು ಅತೀವ ಸಂತಸವಾಗಿದೆ. ಸಹಕಾರಿ ಬ್ಯಾಂಕುಗಳು ಜನಪರವಾಗಿ, ಗ್ರಾಹಕರ ಮನೆಬಾಗಿಲಿಗೆ ಹೋಗಿ ಸಹಕಾರ ನೀಡುತ್ತಿದೆ. ಸಹಕಾರಿ ಸಂಘಗಳು ‌ಬ್ಯಾಂಕಿಂಗ್ ವ್ಯವಸ್ಥೆ ಹೊರತಾಗಿ ಕೃಷಿ ಚಟುವಟಿಕೆಗೆ ಪೂರಕವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆ ತರುವ ಉದ್ದೇಶದಿಂದ ಯಾಂತ್ರೀಕೃತ ಕೃಷಿಯ ಮಾಡಲು ಸಹಕಾರ ಸಂಘಗಳ ಸಹಾಯ ಅತ್ಯಗತ್ಯವಿದೆ. ಆಧುನಿಕ ಕೃಷಿಯ ಮೂಲಕ ಕೃಷಿಯಲ್ಲಿ ಉತ್ತಮ ಆದಾಯವನ್ನು ಗಳಿಸಲು ಸಾಧ್ಯ. ಸಹಕಾರಿ ಸಂಸ್ಥೆಗಳನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿರುತ್ತದೆ.‌ ಸಹಕಾರ ಎನ್ನುವ ಹೆಸರೇ ಪ್ರಿಯವಾಗಿದೆ, ಜಿಲ್ಲೆಯ‌ ಹಿರಿಮೆಗೆ ಸಹಕಾರಿ ಸಂಸ್ಥೆಗಳು ಕಿರೀಟವಿದ್ದಂತೆ,‌ ಹೆಚ್ಚು ರಾಷ್ಟ್ರೀಯ ಬ್ಯಾಂಕ್ ಗಳನ್ನು ಕೊಟ್ಟ ಹಿರಿಮೆ ದಕ್ಷಿಣ‌ಕನ್ನಡ ಜಿಲ್ಲೆಯದ್ದಾಗಿದೆ. ಸಂಬಂಧ ಹಾಗೂ ವ್ಯಕ್ತಿತ್ವದ ಮೇಲೆ ಸಹಕಾರಿ ಬ್ಯಾಂಕ್ ಗಳಲ್ಲಿ‌ ವ್ಯವಹಾರ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಾಗದ ಪತ್ರಗಳ ಆಧಾರದಲ್ಲಿ ನಡೆಯುತ್ತದೆ. ಕೃಷಿಯನ್ನು ಆಧುನೀಕರಣಗೊಳಿಸಿ ಹೊಸತನದೊಂದಿಗೆ ಕೃಷಿಯನ್ನು ಅನುಸರಿಸಿದರೆ, ದೇಶದ ನೈಜಪ್ರಗತಿ ಸಾಧ್ಯ ಎಂದರು.

ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾಗಿರುವ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿರವರು ಧ್ವಜಾರೋಹಣಗೈದು ಮಾತನಾಡಿ ಮಂಚಿ ಸಹಕಾರ ಸಂಘದ ಅಧ್ಯಕ್ಷರು ಎಲ್ಲರನ್ನು ಜೊತೆಯಾಗಿ ಸೇರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ‌ ಮಾಡಿದ್ದಾರೆ. ಸಹಕಾರ ಹಬ್ಬವನ್ನು ಎಲ್ಲರೂ ಯಶಸ್ವಿಯಾಗಿ ಮಾಡಬೇಕಿದೆ.
ನಮ್ಮ ಉದ್ದೇಶ ಈಡೇರಬೇಕಿದೆ. ಹೊರಗಿರುವ ವವರನ್ನು‌ ನಮ್ಮ ಸಹಕಾರಿ ಕಡೆಗೆ ಸೆಳೆಯುವ ಕೆಲಸವಾಗಬೇಕಿದೆ. ಯುವ ಪೀಳಿಗೆ ಸಹಕಾರ ಸಂಘಗಳತ್ತ ಒಲವು ತೋರಬೇಕಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಟಿ. ಜಿ. ರಾಜಾರಾಮ ಭಟ್ ರವರು ‘ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆ’ ವಿಚಾರದ ಕುರಿತು ಉಪನ್ಯಾಸ ನೀಡಿದೀಪಾವಳಿ ಬಣ್ಣದ ಭರವಸೆ ಮೂಡಿಸಲಿ. ಮಂಚಿ ಸಹಕಾರಿಯ ಅಧ್ಯಕ್ಷರಾದ ಉಮ್ಮಾರ್ ರವರು ಸಹಕಾರಿಯ ಬಗ್ಗೆ ಹಲವಾರು ಕನಸು ಕಂಡವರು. ಸಹಕಾರಿ ಚಳುವಳಿಯಲ್ಲಿ ಭಾಗವಹಿಸಿದ ಎಲ್ಲಾ ಸಹಕಾರಿ ಸಂಘಗಳು ಒಟ್ಟು ಸೇರಿ ನಡೆಸುವ ಕಾರ್ಯಕ್ರಮ ಸಹಕಾರಿ ಸಪ್ತಾಹ. ಸಹಕಾರಿ ಸಂಘಗಳ ಅಭಿವೃದ್ಧಿ ಸಹಕಾರಿ ಮಂತ್ರಿ ಅಮಿತ್ ಷಾ ರಿಂದ ನಿರಂತರವಾಗಿ ಆಗುತ್ತಿದೆ. ಹೊಸಹೊಸ ಕಲ್ಪನೆಯಿಂದ ಸಹಕಾರಿ ಸಂಘವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಾಯಿತು. ಸಹಕಾರಿ ಸಂಘದಿಂದ ಎಲ್ಲವನ್ನೂ ಮಾಡಲು ಸಾಧ್ಯವಾದಾಗ ಎಲ್ಲವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಾಯಿತು. ಸಹಕಾರಿ ಸಂಘ ಜನಸ್ನೇಹಿಯಾಗಿ ಕೆಲಸಮಾಡುತ್ತಿದೆ‌ ಎಂದರು.

ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಸುಚರಿತ ಶೆಟ್ಟಿರವರು ಮಾತನಾಡಿಬದಲಾಗುವ ಕಾಲಘಟ್ಟದಲ್ಲಿ ಸಹಕಾರಿ ಸಂಘಗಳು ಬದಲಾವಣೆಯನ್ನು ಕಾಣುತ್ತಾ ಸಾಗಿದೆ. ಎಲ್ಲಾ ವರ್ಗದ ಜನರನ್ನು ಮೇಲಕ್ಕೆತ್ತುವ ಕೆಲಸ ಸಹಕಾರಿಯಿಂದ ಆಗುತ್ತಿದೆ. ಬದಲಾವಣೆಯ ಕಾಲದಲ್ಲಿ ಬದಲಾಗುವುದು ಅನಿವಾರ್ಯ. ಸಹಕಾರಿಯನ್ನು ಸುದೃಡವಾಗಿ ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ.ಹೈನುಗಾರಿಕೆಯನ್ನು ಬೆಳೆಸಿ ನಮ್ಮ ದೇಶದ ಅಸ್ಮಿತೆಯನ್ನು ಉಳಿಸಬೇಕು. ಸಹಕಾರಿ ಸಂಘಗಳು ಹೈನುಗಾರಿಕೆಗೆ ಒತ್ತು ನೀಡಬೇಕು. ಯುವಪೀಳಿಗೆಗಳು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳು ಕೆಲಸವಾಗಬೇಕು. ಹಳ್ಳಿಯ ಹೈನುಗಾರಿಕೆ ಉಳಿದರೆ ಹಳ್ಳಿಯ ಕೃಷಿ ಉಳಿದಂತೆ ಎಂದರು.

ಮಂಚಿ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಹಾಸ ಕರ್ಕೇರರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಜೀರೋದಿಂದ ಮೇಲೆ ಬಂದ ಸಹಕಾರಿ ನಮ್ಮದು. 70ನೇ ಸಹಕಾರಿ ಸಪ್ತಾಹದೊಂದಿಗೆ ನಮ್ಮ ಸಹಕಾರಿಯ 70ನೇ ವಾರ್ಷಿಕೋತ್ಸವವನ್ನು ಆಚರಿಸುವಂತಾಗಿದೆ. ಹಲವಾರು ಹಿರಿಯರ ಕಠಿಣ ಪರಿಶ್ರಮದ ಫಲವಾಗಿ 1953ರಲ್ಲಿ ಸಂಸ್ಥೆಯ ಹುಟ್ಟಾಗಿದೆ.
1996ರ ಬಳಿಕ ಸಂಸ್ಥೆ ಏಳಿಗೆ ಕಾಣಲು ಸಾಧ್ಯವಾಯಿತು. ಸಂಘದ ಅಭಿವೃದ್ಧಿ ಎಲ್ಲರು ಜೊತೆಯಾಗಿ ಸಾಗಿದಾಗ ಮಾತ್ರ ಸಾಧ್ಯ‌. ಸೊಸೈಟಿಯಲ್ಲಿ ಪಕ್ಷ ಭೇದ ಮರೆತು ಕೆಲಸಮಾಡುತ್ತಿದ್ದೇವೆ. 20 ಜನರಿಂದ ಆರಂಭವಾದ ಸಹಕಾರಿಯಲ್ಲಿ ಇದೀಗ 3721 ಸದಸ್ಯರಿದ್ದಾರೆ. ಕಳೆದ ವಾರ್ಷಿಕ ವರ್ಷದಲ್ಲಿ 1ಕೋಟಿ ಹದಿನೈದು ಲಕ್ಷ ಲಾಭ ಬಂದಿದೆ ಎಂದರು.

ಸಾಧಕರಿಗೆ ಸನ್ಮಾ‌ನ:
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐ ನೇಮು ಪೂಜಾರಿ, ಪ್ರಗತಿಪರ ಕೃಷಿಕರಾಗಿರುವ ಬಾಲಾಜಿಬೈಲು ವಿಠಲ ರೈ, ಮೋಂತು ಅಲ್ಬುಕರ್ಕ್, ಸಿ.ಹೆಚ್. ಮಹಮ್ಮದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕಮಂಡಲ ಇರಾ ಹಾಗೂ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಅಧ್ಯಕ್ಷರನ್ನು, ಮಂಚಿ ಸೇವಾ ಸಹಕಾರ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿರುವ ವೆಂಕಟೇಶ್ ಪ್ರತಾಪ್ ಪಿ., ರವೀಂದ್ರ ಶೆಟ್ಟಿ, ರಾಮಕೃಷ್ಣ ಭಟ್ ಕಜೆ,
ಮಂಚಿ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಪಿ.ಎಂ.ಕೊಡಂಗೆ, ಸಾಯಿನಾಥ ಪೂಂಜ, ಕಯ್ಯೂರು ನಾರಾಯಣ ಭಟ್, ಚಂದ್ರಹಾಸ ಕರ್ಕೇರ, ನವೋದಯ ಸಂಘದ ಪ್ರೇರಕಿ ತುಳಸಿ ಪಿ.ರವರನ್ನು ಅತಿಥಿಗಳು ಗೌರವಿಸಿದರು.

ಮಾಜಿ ಸಚಿವ ರಮಾನಾಥ ರೈರವರು ಸಹಕಾರ ಸಪ್ತಾಹದ ಮೆರವಣಿಗೆಯನ್ನು ಉದ್ಘಾಟಿಸಿದರು. ಸ್ಕ್ಯಾಡ್ಸ್‌ನ ಅಧ್ಯಕ್ಷರಾಗಿರುವ ರವೀಂದ್ರ ಕಂಬಳಿ, ಕ್ಯಾಂಪ್ಕೊ ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ , ಭೂ ಅಭಿವೃದ್ಧಿ ಬ್ಯಾಂಕ್ ಬಂಟ್ವಾಳ ಇದರ ಅಧ್ಯಕ್ಷರಾಗಿರುವ ಅರುಣ್ ರೋಶನ್ ಡಿಸೋಜ, ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿರುವ ಜೆ. ಸುಧೀರ್ ಕುಮಾರ್, ಸಹಕಾರಿ ಯೂನಿಯನ್ ನ ನಿರ್ದೇಶಕರಾದ ಸಾವಿತ್ರಿ ರೈ, ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ,
ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಇಬ್ರಾಹಿಂ ಜಿ. ಎಮ್., ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಉಮ್ಮರ್ ಎಂ.ಬಿ.,ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್. ಜೆ., ಸಹಕಾರ ಸಂಘಗಳ ವಲಯ ಮೇಲ್ವಿಚಾರಾದ ಯೋಗೀಶ ಹೆಚ್, ಪ್ರಮುಖರಾದ ಸವಿತಾ ಶೆಟ್ಟಿ, ಹೀರೇಮಠ್, ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ನಾಯ್ಕ್ ಎನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಿ., ನಿರ್ದೇಶಕರಾದ ಅಬ್ದುಲ್ ರಹಿಮಾನ್, ಭಾಗೀರಥಿ ಎಮ್, ಮೋಹನದಾಸ ಶೆಟ್ಟಿ, ಕೇಶವ ರಾವ್ ಎನ್, ದಿವಾಕರ ನಾಯಕ್, ಸುಧಾಕರ‌ ರೈ, ನಿಶ್ಚಲ್ ಜಿ. ಶೆಟ್ಟಿ, ದೇವಿಪ್ರಸಾದ್ ಎಮ್, ಫಿಲೋಮಿನಿ, ಸಂದ್ಯಾಕುಮಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ನಿ.ದ ಅಧ್ಯಕ್ಷರಾಗಿರುವ ಬಿ. ಉಮ್ಮರ್ ರವರು ಸ್ವಾಗತಿಸಿ ಬ್ಯಾಂಕ್ ನಡೆದು ಬಂದ ಹಾದಿ ಹಾಗೂ ಯಶಸ್ಸಿನ ಬಗ್ಗೆ‌ ಮಾಹಿತಿ ನೀಡಿದರು.

ಕುಕ್ಕಾಜೆ ಕುಕ್ಕಾಜೆಮಹಾದೇವ ವಿವಿದೋದ್ಧೇಶ ಸಹಕಾರ ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಮತ್ತು ಮುತ್ತಯ್ಯ ಮರಾಟೆ ಕಾರ್ಯಕ್ರಮ ನಿರೂಪಿಸಿದರು. ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ದಿವಾಕರ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here