ನ.16: ಬೆಟ್ಟಂಪಾಡಿ ರೆಂಜದಲ್ಲಿ ಶ್ರೀಗಣೇಶ್ ಮೆಡಿಕಲ್ಸ್ ಶುಭಾರಂಭ

0

ಪುತ್ತೂರು: ಬೆಟ್ಟಂಪಾಡಿ ರೆಂಜದಲ್ಲಿರುವ ಎಂ.ಎ.ಕಾಂಪ್ಲೆಕ್ಸ್‌ನಲ್ಲಿ ನ.16ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಗಣೇಶ್ ಮೆಡಿಕಲ್ಸ್ ಶುಭಾರಂಭಗೊಳ್ಳಲಿದೆ. ಇರ್ದೆಬೆಟ್ಟಂಪಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯ ಪ್ರಕಾಶ್ ರೈ ಬೈಲಾಡಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರೆಂಜ ಮಸೀದಿಯ ಖತೀಬ್ ಆಸೀಪ್ ಸಖಾಪಿ, ಬೆಟ್ಟಂಪಾಡಿ ಲಕ್ಷ್ಮೀ ಕ್ಲಿನಿಕ್‌ನ ಡಾ.ಸುಬ್ರಹ್ಮಣ್ಯ ವಾಗ್ಲೆ, ಶ್ರೀದುರ್ಗಾ ಕ್ಲಿನಿಕ್‌ನ ಡಾ.ಕೃಷ್ಣ ಭಟ್, ಶ್ರೀದೇವಿ ಕ್ಲಿನಿಕ್‌ನ ಡಾ.ಸತೀಶ್ ಬಿ.,ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮಲ್ಲಿ ಅಲೋಪತಿ, ಪಶು ಔಷಧಗಳು, ಸರ್ಜಿಕಲ್ ಸಾಮಾಗ್ರಿಗಳು ಹಾಗೂ ಸೌಂದರ್ಯ ವರ್ಧಕಗಳು ದೊರೆಯುತ್ತದೆ. ಗ್ರಾಹಕರು ಆಗಮಿಸಿ ಶುಭ ಹಾರೈಸಬೇಕೆಂದು ಮಾಲಕರಾದ ಕಾರ್ತಿಕ್ ರೈ ಕೈಕಾರ ಮತ್ತು ಗಣೇಶ್‌ರಾಜ್ ಶೆಟ್ಟಿ ಕೈಕಾರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here