ಕಾರ್‌ ಕ್ಲಬ್‌ ಸಂಸ್ಥೆಯ ಇದರ ನೂತನ ಶಾಖೆ ಕಾರ್‌ ಟಿಂಕರಿಂಗ್‌ ಮತ್ತು ಪೈಟಿಂಗ್‌ ವರ್ಕ್‌ ಉಪ್ಪಿನಂಗಡಿ ಸಂತೆಕಟ್ಟೆ ಕಾರ್‌ ಕ್ಲಬ್‌ ಬಿಲ್ಡಿಂಗ್‌ ನಲ್ಲಿ ಶುಭಾರಂಭ

0

ಪುತ್ತೂರು: ಕಾರ್‌ ಕ್ಲಬ್‌ ಸಂಸ್ಥೆಯ ಇದರ ನೂತನ ಶಾಖೆ ಕಾರ್‌ ಟಿಂಕರಿಂಗ್‌ ಮತ್ತು ಪೈಟಿಂಗ್‌ ವರ್ಕ್‌ ಉಪ್ಪಿನಂಗಡಿ 34ನೇ ನೆಕ್ಕಿಲಾಡಿಯ ಸಂತೆಕಟ್ಟೆ ಬಳಿಯ ಕಾರ್‌ ಕ್ಲಬ್‌ ಬಿಲ್ಡಿಂಗ್‌ ನಲ್ಲಿ ಶುಭಾರಂಭಗೊಂಡು ಇದರ ಉದ್ಘಾಟನೆ ಮತ್ತು ಆಯುಧ ಪೂಜೆ ಅ.23ರಂದು ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗಿರಿಜ ಡೆಂಟಲ್‌ ಕ್ಲಿನಿಕ್‌ ದಂತ ವೈದ್ಯ ಡಾ.ರಾಜಾರಾಮ ಕೆ.ಬಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ. ನಿರಂಜನ್‌ ರೈ , ಪುತ್ತೂರು ರೂರಲ್‌ ಸರ್ಕಲ್‌ ಇನ್ಸ್ ಪೆಕ್ಟರ್‌ ರವಿ ಬಿಎಸ್‌ , ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ರಾಜೇಶ್‌ ಕೆ, ಸುಳ್ಯ ಪೊಲೀಸ್‌ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ಈರಯ್ಯ ದಂತೂರು, 34ನೇ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಉಪಸ್ಥಿತರಿದ್ದರು. ಮಾಲಕ ಸದಾನಂದ ಕೆ.ಎನ್‌ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗೌತಮ್‌ ಕೆ ಎಸ್‌ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here