ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ಮೋಹನ್ ಗೌಡ ಕಬಕ, ಕಾರ್ಯದರ್ಶಿ ಮನೋಜ್

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘದ ಬನ್ನೂರು ವಲಯದ ಅಧ್ಯಕ್ಷರಾಗಿ ಮೋಹನ್ ಗೌಡ ಕಬಕ, ಕಾರ್ಯದರ್ಶಿಯಾಗಿ ಮನೋಜ್ ಜತ್ತಿಬೆಟ್ಟು ಬೆಳ್ಳಿಪ್ಪಾಡಿ ಅವರು ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಬನ್ನೂರು ಯುವ ಗೌಡ ಸೇವಾ ಸಂಘ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ರಾಮಚಂದ್ರ ಅವರ ಮನೆಯಲ್ಲಿ ನಡೆದ ಬನ್ನೂರು ವಲಯಕ್ಕೆ ಸಂಬಂಧಿಸಿದ ಕಬಕ, ಪಡ್ನೂರು, ಬನ್ನೂರು, ಚಿಕ್ಕಮೂಡ್ನರು, ಬೆಳ್ಳಿಪ್ಪಾಡಿ ಗ್ರಾಮದ ಪ್ರಮುಖರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕ್ರೀಡಾ ಕಾರ್ಯದರ್ಶಿಯಾಗಿ ಪ್ರಕಾಶ್ ಗೌಡ ಕೆಮ್ಮಾಯಿ, ಸಂಘಟನಾ ಕಾರ್ಯದರ್ಶಿಯಾಗಿ ವಸಂತ ಗೌಡ ನೆಕ್ಕರಾಜೆ, ಗೌರವಾಧ್ಯಕ್ಷರಾಗಿ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಪುಳುವಾರು ಹಾಗೂ ಮೋಹನ್ ಗೌಡ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ವಸಂತ ಗೌಡ ಕೈಲಾಜೆ, ಕೋಶಾಧಿಕಾರಿಯಾಗಿ ಶೇಖರ ಗೌಡ ಬನ್ನೂರು, ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಗೌಡ ಕೆಮ್ಮಾಯಿ, ಜೋತೆ ಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಮುರ, ಸಂಘಟನಾ ಕಾರ್ಯದರ್ಶಿ ಯಾಗಿ ವಸಂತ ಗೌಡ ನೆಕ್ಕರಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ದಯಾನಂದ ಗೌಡ ಕೊಡಿಮರ, ಮತ್ತು ಬನ್ನೂರು ವಲಯದ ಉಸ್ತುವಾರಿ ಯಾಗಿ ಪೂವಪ್ಪ ದೇಂತಡ್ಕ ಪಡ್ನೂರು ಇವರನ್ನು ಆಯ್ಕೆ ಮಾಡಲಾಯಿತು. ಸಭೆ ಯಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಎಂ.ವಿ ನಾರಾಯಣ, ಅಧ್ಯಕ್ಷ ಮನೋಹರ್ ಡಿ.ವಿ, ಹಿರಿಯ ಸಂಘದ ಬನ್ನೂರು ವಲಯದ ಉಸ್ತುವಾರಿ ವಿಶ್ವನಾಥ ಗೌಡ ಬನ್ನೂರು, ಸಲಹಾ ಸಮಿತಿ ಸದಸ್ಯರಾದ ಮಾದವ ಗೌಡ ಪೆರಿಯತ್ತೊಡಿ, ಪುತ್ತೂರು ತಾಲೂಕಿನ ಯುವ ಒಕ್ಕಲಿಗ ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷ ಅಮರನಾಥ ಬಪ್ಪಳಿಗೆ, ಪುತ್ತೂರು ವಲಯದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಕಾರ್ಯದರ್ಶಿ ಆನಂದ್ ಗೌಡ ತೆಂಕಿಲ, ಯುವರಾಜ್ ಪೆರಿಯತ್ತೋಡಿ, ಉಪಸ್ಥಿತರಿದ್ದರು. ಆನಂದ ಗೌಡ ಸ್ವಾಗತಿಸಿ., ರಾಮಣ್ಣ ಗೌಡ ಗುಂಡೋಳೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here