ಆತೂರು ಸೌಭಾಗ್ಯ ಇಂಡಸ್ಟ್ರೀಸ್ ಮಾಲಕ ಮುತ್ತಪ್ಪ ಪೂಜಾರಿ ನಿಧನ

0

ರಾಮಕುಂಜ: ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿ, ಆತೂರು ಸೌಭಾಗ್ಯ ಇಂಡಸ್ಟ್ರೀಸ್ ಮಾಲಕ ಮುತ್ತಪ್ಪ ಪೂಜಾರಿ(62ವ.)ರವರು ಅನಾರೋಗ್ಯದಿಂದ ನ.21ರಂದು ರಾತ್ರಿ ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ನಿಧನರಾದರು.


ಮುತ್ತಪ್ಪ ಪೂಜಾರಿಯವರು ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನದ ಹಿಂದೆ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಅವರು ಅಲ್ಲಿ ನಿಧನರಾದರು ಎಂದು ವರದಿಯಾಗಿದೆ. ಇವರು ಸುಮಾರು 40 ವರ್ಷಗಳ ಹಿಂದೆ ಆತೂರಿನಲ್ಲಿ ಸೌಭಾಗ್ಯ ಇಂಡಸ್ಟ್ರೀಸ್ ಆರಂಭಿಸಿ ಮುನ್ನಡೆಸಿಕೊಂಡು ಬರುತ್ತಿದ್ದರು. ಪ್ರಸ್ತುತ ಆತೂರಿನಲ್ಲಿಯೇ ಮನೆ ಮಾಡಿ ಪತ್ನಿ, ಮಕ್ಕಳೊಂದಿಗೆ ವಾಸ್ತವ್ಯವಿದ್ದರು. ಕೆಲ ಸಮಯದ ಹಿಂದೆ ಆತೂರಿನಲ್ಲಿ ಕೊರಗಜ್ಜ ದೈವದ ಕಟ್ಟೆ ನಿರ್ಮಿಸಿ ಆರಾಧಿಸಿಕೊಂಡು ಬರುತ್ತಿದ್ದರು. ಅಲ್ಲದೇ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹೇಮಾವತಿ, ಪುತ್ರರಾದ ಮನೀಷ್, ನಿತೇಶ್, 8 ಮಂದಿ ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here