ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಹಾಗೂ ಪುತ್ತಿಲ ಪರಿವಾರ ಮುಂಡೂರು ಜಂಟಿ ಆಶ್ರಯದಲ್ಲಿ ಅರ್ಧ ಏಕಾಹ ಭಜನೆ, ಸಾರ್ವಜನಿಕ ಶ್ರೀ ದುರ್ಗಾ ಪೂಜೆ, ಸುಧರ್ಮ ಸಭೆ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಮತ್ತು ಪುತ್ತಿಲ ಪರಿವಾರ ಮುಂಡೂರು ಇದರ ಜಂಟಿ ಆಶ್ರಯದಲ್ಲಿ ದ್ವಿತೀಯ ವರ್ಷದ ಅರ್ಧ ಏಕಾಹ ಭಜನೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಹಾಗೂ ಸುಧರ್ಮ ಸಭೆ 2024 ಜ.6ರಂದು ಪುತ್ತಿಲ ಶ್ರೀರಾಮ ಕ್ರೀಡಾಂಗಣದಲ್ಲಿ ನಡಯಲಿದ್ದು ಆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನ.26ರಂದು ಪುತ್ತಿಲದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಮಾಡಲಾಯಿತು.

ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷರು, ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರ.ಕಾರ್ಯದರ್ಶಿ ಬಾಲಚಂದ್ರ ಸೊರಕೆ, ಕೋಶಾಧಿಕಾರಿ ಬಾಲಚಂದ್ರ ಗೌಡ ಕಡ್ಯ,ಸಂಚಾಲಕ ನೀಲಪ್ಪ ಪೂಜಾರಿ ಕುರೆಮಜಲು, ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲು, ಪುಷ್ಪಾ ಪುರಂದರ ನಡುಬೈಲು, ಅರುಣಾ ಅನಿಲ್ ಕಣ್ಣಾರ್ನೂಜಿ, ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಸಾದ್ ಬಿ.ಕೆ, ಕಾರ್ಯದರ್ಶಿ ಯೋಗೀಶ್ ಕಲ್ಲಮ, ಮುಂಡೂರು ಬೂತ್ ಸಮಿತಿ ಅಧ್ಯಕ್ಷ ಸೇಸಪ್ಪ ಶೆಟ್ಟಿ ಪೋನೋನಿ ಹಾಗೂ ಕುಶಾಲಪ್ಪ ಗೌಡ ಕಡ್ಯ, ಬೂತ್ ಸಮಿತಿ ಕಾರ್ಯದರ್ಶಿ ಅಶೋಕ್ ನಾಯ್ಕ ಪುತ್ತಿಲ, ಸಂತೋಷ್ ಶೆಟ್ಟಿ ಪಂಜಳ, ಸಂತೋಷ್ ತೌಡಿಂಜ, ಪೂಜಾ ಸಮಿತಿಯ ಪದಾಧಿಕಾರಿಗಳಾದ ಸುಂದರ ಗೌಡ ನಡುಬೈಲು, ಹರೀಶ ಬಿ.ಕೆ, ಪುರಂದರ ಗೌಡ ನಡುಬೈಲು,ಸುಂದರ ನಾಯ್ಕ ಬಿ.ಕೆ, ಚಂದ್ರಶೇಖರ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ, ವಿಶ್ವನಾಥ ಗೌಡ ಕರೆಮನೆ, ಸಜ್ಜನ್ ಕುಮಾರ್ ಕಣ್ಣಾರ್ನೂಜಿ, ಗಣೇಶ್ ನಾಯ್ಕ ಕೊಡಿಬೈಲ್, ಬಾಲಕೃಷ್ಣ ಶೆಟ್ಟಿ ಪಂಜಳ, ಜಗದೀಶ್ ಕಲ್ಲಮ, ರಾಧಾಕೃಷ್ಣ ಪುತ್ತಿಲ, ವಿನಯಚಂದ್ರ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಅಭಿಷೇಕ್ ಕಲ್ಲಮ, ಮನೀಶ್ ಕರೆಮನೆಕಟ್ಟೆ, ಧನಂಜಯ ಕಲ್ಲಮ, ಜನಾರ್ಧನ ಕುರೆಮಜಲು, ನಾರಾಯಣ ನಾಯ್ಕ ಪುಳಿಕೆತಡಿ, ನಿಶಾಂತ್ ಕುರೆಮಜಲು, ಬಾಲಕೃಷ್ಣ ಶೆಟ್ಟಿ ಪಟ್ಟೆ, ನಿತಿನ್ ಶೆಟ್ಟಿ ಮುಂಡೂರು, ವಿನೋದ್ ಶೆಟ್ಟಿ ಪಂಜಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here