ರಾಷ್ಟ್ರ ಮಟ್ಟದ ಕಬಡ್ಡಿಗೆ ಆಯ್ಕೆಯಾದ ಶಶಾಂಕ್ ಗೆ ಸವಣೂರಿನಲ್ಲಿ ಅದ್ದೂರಿ ಸ್ವಾಗತ

0

ಪುತ್ತೂರು: 14 ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪಿ ಎಂ ಶ್ರೀ ವೀರಮಂಗಲ ಶಾಲೆಯ ಹಿರಿಯ ವಿದ್ಯಾರ್ಥಿ ಶಶಾಂಕ್ ವೀರಮಂಗಲ ಇವರನ್ನು ಸವಣೂರಿನಲ್ಲಿ ನ. 26 ರಂದು ಅದ್ದೂರಿಯಿಂದ ಸ್ವಾಗತಿಸಲಾಯಿತು.

ಸವಣೂರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೂಮಾಲೆ ಮತ್ತು ಶಾಲು ಹೊದಿಸಿ ಗೌರವಿಸಿದರು. ಸವಣೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಅಟೋ ರಿಕ್ಷಾದ ಮಾಲಕರು ಯುವಕಮಂಡಲದ ಸದಸ್ಯರು ಗೌರವಿಸಿದರು. ವೀರಮಂಗಲ ಶಾಲೆಯ ಮುಖ್ಯ ಗುರು ತಾರಾನಾಥ ಸವಣೂರು, ಕೊಂಬೆಟ್ಟು ಪ.ಪೂ ಕಾಲೇಜಿನ ಉಪಪ್ರಾಚಾರ್ಯ ವಸಂತ ಮೂಲ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ಶಿಕ್ಷಕಿ ಹರಿಣಾಕ್ಷಿ, ವೀರಮಂಗಲ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ, ಉಪಾಧ್ಯಕ್ಷ ರಝಾಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here