ಬರೆಪ್ಪಾಡಿ:ಸುರಭಿ ಸಮೂಹ ಸಂಸ್ಥೆಗಳ ಸುರಭಿ ಬಾರ್ ಮತ್ತು ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಾದ್ಯಂತ ಉತ್ತಮ ಗ್ರಾಹಕ ಸೇವೆ ನೀಡುತ್ತಿರುವ ಸುರಭಿ ಗ್ರೂಪ್ಸ್ ಇದರ ಸಹ ಸಂಸ್ಥೆ
ಸುರಭಿ ಬಾರ್ ಆಂಡ್ ರೆಸ್ಟೋರೆಂಟ್ ನ.29 ರಂದು ಬರೆಪ್ಪಾಡಿಯ ರಜತಾದ್ರಿ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.


ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾದ ಮೋಹನ್ ರೈ ಸೂತ್ರಬೆಟ್ಡು, ಶಿವಪ್ರಸಾದ್ ಶೆಟ್ಟಿ ಮಂಗಳೂರು, ಸುರಭಿ ಗ್ರೂಪ್ ನ ರತ್ನಾಕರ್ ಪೂಜಾರಿ, ರಜತಾದ್ರಿ ವಾಣಿಜ್ಯ ಸಂಕೀರ್ಣದ ಮಾಲಕ ಗಿರಿಯಪ್ಪ ಗೌಡ ಸಹಿತ ಹಲವರು ಉಪಸ್ಥಿತರಿದ್ದರು.


ಉತ್ತಮ ಗುಣಮಟ್ಟದ ಮದ್ಯವನ್ನು ಮಿತದರದಲ್ಲಿ ಪೂರೈಸುತ್ತಿದ್ದು ಮಾತ್ರವಲ್ಲ ಶುಚಿ-ರುಚಿಯಾದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ದೊರೆಯುತ್ತಿದ್ದು ಗ್ರಾಹಕರು ಸಹಕರಿಸುವಂತೆ ಸುರಭಿ ಗ್ರೂಪ್ಸ್ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ನೂತನ ಬಾರ್ ಆಂಡ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದ ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here