ಹಳೆನೇರೆಂಕಿ ಐ.ಲಕ್ಷ್ಮೀ ಇಜ್ಜಾವು ನಿಧನ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ಇಜ್ಜಾವು ದಿ. ಸುಬ್ರಾಯರ ಪತ್ನಿ ಐ.ಲಕ್ಷ್ಮೀ(92ವ.)ರವರು ವಯೋಸಹಜ ಅಲ್ಪ ಕಾಲದ ಅಸೌಖ್ಯದಿಂದ ದ.1ರಂದು ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ನಿಧನರಾದರು.


ದಾನ- ಧರ್ಮಾದಿಗಳು, ಮಾರ್ಗದರ್ಶನ, ದೇವಾಲಯಗಳು, ವಿದ್ಯಾಲಯಗಳು, ದೇಶ ಸೇವೆಗಳಿಗೆ ಹೆಸರಾಗಿದ್ದ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜೈಲು ಪಾಲಾಗಿದ್ದ ಇಜ್ಜಾವು ಸುಬ್ರಾಯರ ಬೆನ್ನೆಲುಬಾಗಿ ದುಡಿದಿದ್ದ ಇವರು ಆದರ್ಶ ಗೃಹಿಣಿಯಾಗಿ ಬದುಕು ಸಾಗಿಸುತ್ತಿದ್ದರು. ಮೃತರು ಪುತ್ರಿ ಐ.ಶಶಿಕಲಾ, ಅಳಿಯ ಖ್ಯಾತ ಧಾರ್ಮಿಕ ಮಾರ್ಗದರ್ಶಕರಾದ ಜ್ಯೋತಿಷಿ ಎ.ಮಾಧವ ಆಚಾರ್ಯ, ಮೊಮ್ಮಕ್ಕಳಾದ ಉದ್ಯಮಿ, ಪುತ್ತೂರಿನ ಎಸ್‌ಆರ್ ಬಿಲ್ಡರ್ಸ್‌ನ ಶಿವಪ್ರಸಾದ ಇಜ್ಜಾವು, ಕವಿತಾ ಶಿವಪ್ರಸಾದ್, ಮುಂಬೈ ನಿವಾಸಿ ಐ.ಯುಷ್ಮಾ, ಪ್ರೇಮ್‌ಚಂದ್ ರಾವ್ ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.


ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣೋದ್ಯಮಿ ಬಲರಾಮ ಆಚಾರ್ ಪುತ್ತೂರು, ಡಾ. ಕೆ.ಜಿ ಭಟ್ ಉಪ್ಪಿನಂಗಡಿ, ಡಾ.ಮುರಳೀಧರ ನೆಲ್ಯಾಡಿ ಮತ್ತಿತರ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಇ.ಕೃಷ್ಣಮೂರ್ತಿ ಕಲ್ಲೇರಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್ ರಾಮಕುಂಜ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಹಳೆನೇರೆಂಕಿ ಶಾಲೆಯ ಮುಖ್ಯಗುರು ಸಾಂತಪ್ಪ ಗೌಡ, ವಿದ್ಯಾರಣ್ಯ ಕಲ್ಲೇರಿ, ಮನೋಹರ ಕಲ್ಲೇರಿ, ರಾಮಕುಂಜ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here