ಪಾಣಾಜೆ: ಮನೆ ಸ್ಥಳಕ್ಕೆ ಅಕ್ರಮ ಪ್ರವೇಶ – ಜೀವ ಬೆದರಿಕೆ ಆರೋಪ-ದೂರು ದಾಖಲು

0

ಪುತ್ತೂರು:ಪಾಣಾಜೆ ಗ್ರಾಮದಲ್ಲಿ ಮನೆ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆಯೊಡ್ಡಿದ ಕುರಿತು ಮಹಿಳೆಯೋರ್ವರು ನೀಡಿರುವ ದೂರಿಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆದಂಬಾಡಿ ಗ್ರಾಮದ ಕೆ.ಸುಮಂಗಳ ಎಸ್ ಶರ್ಮ ಎಂಬವರು ದೂರು ನೀಡಿ, ನಾವು ಪಾಣಾಜೆ ಗ್ರಾಮದಲ್ಲಿ ಜಮೀನು ಖರೀದಿಸಿದ್ದು, ಆ ಜಮೀನಿನಲ್ಲಿ ನ.30ರಂದು ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿ ನಮ್ಮ ಮನೆ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ದಿವಾಕರ ಕುಲಾಲ್, ಅವಿನಾಶ್ ಮತ್ತು ರಾಮಕೃಷ್ಣ ಭಟ್ ಎಂಬವರು ಇಲ್ಲಿ ಯಾವುದೇ ಕೃಷಿ ಕೆಲಸ ಮಾಡಿಸಬಾರದು, ಆಳುಗಳನ್ನು ಕರೆದುಕೊಂಡು ಬರಬಾರದು, ಮರಳಿ ಬಂದಲ್ಲಿ ಜೀವ ಸಹಿತ ಹೇಗೆ ಹೋಗುತ್ತೀರಿ ನೋಡಿಕೊಳ್ಳುತ್ತೇವೆಂದು ಪ್ರಾಣ ಬೆದರಿಕೆಯೊಡ್ಡಿದ್ದಲ್ಲದೆ ಅವಿನಾಶ್ ಕೆ ಮತ್ತು ರಾಮಕೃಷ್ಣ ಅವರು ಮೊಬೈಲ್‌ನಲ್ಲಿ ನನ್ನ ಫೋಟೋವನ್ನು ತೆಗೆದಿದ್ದು, ಇದರಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here