ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದಿಂದ ಪದ್ಮಪ್ಪ ಗೌಡರಿಗೆ ಗೌರವಾರ್ಪಣೆ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನ.29ರಂದು ನಿವೃತ್ತರಾದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆಯ ಸಲಹಾ ಸಮಿತಿಯ ಸಲಹೆಗಾರರಾದ ಪದ್ಮಪ್ಪ ಗೌಡ ಕೆ.,ಅವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಆಲಂಕಾರು ಶಾಖೆಯ ಗೌರವ ಸಲಹೆಗಾರರಾದ ಈಶ್ವರ ಗೌಡ ಪಜ್ಜಕಡ್ಕ, ನಾಗಪ್ಪ ಗೌಡ ಮರುವಂತಿಲ, ಸಲಹಾ ಸಮಿತಿಯ ಸದಸ್ಯರಾದ ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಶಿವಣ್ಣ ಗೌಡ ಕಕ್ವೆ, ವೀರೇಂದ್ರ ಗೌಡ ಪಾಲೆತ್ತಡ್ಡ, ಸದಾನಂದ ಗೌಡ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ಸುಂದರ ಗೌಡ ನೆಕ್ಕಿಲಾಡಿ, ಮಂಜಪ್ಪ ಗೌಡ ಕಜೆ, ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಸುಧಾಕರ ಕೆ., ಮೇನೇಜರ್ ಶ್ರೀಮತಿ ರೇವತಿ, ಸಿಬ್ಬಂದಿ ವಿಜಯಕುಮಾರ್, ಪಿಗ್ಮಿ ಸಂಗ್ರಾಹಕ ಭವಿತ್‌ರಾಜ್, ಪುತ್ತೂರು ಎಪಿಎಂಸಿ ಶಾಖೆಯ ಅಟೆಂಡರ್ ಯಶ್ವಿತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here