ಶಾಂತಿನಗರ ಶಾಲೆಗೆ ಬಟ್ಟಲು ಸ್ಟ್ಯಾಂಡ್ ಕೊಡುಗೆ

0

ನೆಲ್ಯಾಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಗೋಳಿತ್ತಟ್ಟು ಇಲ್ಲಿಗೆ ವಿದ್ಯಾರ್ಥಿಗಳ ಅಕ್ಷರ ದಾಸೋಹದ ಬಟ್ಟಲು ಇಡಲು ಅನುಕೂಲಕರವಾದ ರೂ.8 ಸಾವಿರ ಬೆಲೆಯ ಕಪಾಟನ್ನು ಶಾಲೆಯ ಹಿರಿಯ ವಿದ್ಯಾರ್ಥಿ ನಾಸೀರ್ ನೂಜೋಳು ಕೊಡುಗೆಯಾಗಿ ನೀಡಿದರು.

ದಾನಿ ನಾಸೀರ್ ನೂಜೋಳು ಅವರು ಕೊಡುಗೆಯನ್ನು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಸದಸ್ಯರಾದ ರಾಘವೇಂದ್ರ ಮುರಿಯೇಲು, ಸುಂದರ ಆಲಂತಾಯ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here