ಯುವವಾಹಿನಿ ಪುತ್ತೂರು ಘಟಕ ವಾರ್ಷಿಕ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ಜಯರಾಮ ಬಿ.ಎನ್,ಕಾರ್ಯದರ್ಶಿ: ಸಮಿತ್ ಪಿ,ಕೋಶಾಧಿಕಾರಿ: ಶರತ್ ಸಾಲ್ಯಾನ್

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ. 02 ರಂದು ಘಟಕದ ಅಧ್ಯಕ್ಷ ಉಮೇಶ್ ಬಾಯರ್ ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಘಟಕದ ಉಪಾಧ್ಯಕ್ಷ ಜಯರಾಮ್ ಬಿ. ಎನ್. ಕಾರ್ಯದರ್ಶಿ ಬಿ ಅಣ್ಣಿ ಪೂಜಾರಿ, ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸನಿಲ್, ಜತೆ ಕಾರ್ಯದರ್ಶಿ ಸಮಿತ್ ಪಿ ಉಪಸ್ಥಿತರಿದ್ದರು.


ಪದಾಧಿಕಾರಿಗಳ ಆಯ್ಕೆ:
ಚುನಾವಣಾ ಸಮಿತಿಯ ಸದಸ್ಯರಾದ ಬಾಬು ಪೂಜಾರಿ ಇದ್ಪಾಡಿ 2023-24ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ನಿರ್ದೇಶಕರುಗಳ ಹೆಸರನ್ನು ವಾಚಿಸಿದರು. ಅಧ್ಯಕ್ಷರಾಗಿ ಜಯರಾಮ ಬಿ ಎನ್. ಉಪಾಧ್ಯಕ್ಷರಾಗಿ ಬಿ ಅಣ್ಣಿ ಪೂಜಾರಿ, ಕಾರ್ಯದರ್ಶಿಯಾಗಿ ಸಮಿತ್ ಪಿ, ಜೊತೆ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಬಿ.ಕೆ ಬಲ್ನಾಡು, ಕೋಶಾಧಿಕಾರಿಯಾಗಿ ಶರತ್ ಸಾಲ್ಯಾನ್ ದೋಳ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಉಮೇಶ ಪಾನೆ, ಕ್ರೀಡಾ ನಿರ್ದೇಶಕರಾಗಿ ಲೋಹಿತ್ ಕೆ, ಆರೋಗ್ಯ ನಿರ್ದೇಶಕರಾಗಿ ಮೋಹನ ಎಸ್, ಸಮಾಜ ಸೇವೆ ನಿರ್ದೇಶಕರಾಗಿ ಗಣೇಶ್ ಸುವರ್ಣ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಶಿವಪ್ರಸಾದ್, ಸಾಂಸ್ಕೃತಿಕ ನಿರ್ದೇಶಕರಾಗಿ ಅಭಿಷೇಕ್ ಕೋಟ್ಯಾನ್, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಅವಿನಾಶ್ ಹಾರಾಡಿ, ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಟಾನ ನಿರ್ದೇಶಕರಾಗಿ ದಾಮೋದರ ಸುವರ್ಣ ಶಾಂತಿಗೋಡು, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ದೀಕ್ಷಿತ್ ಕುಮಾರ್ ಐ, ಪ್ರಚಾರ ನಿರ್ದೇಶಕರಾಗಿ ನವ್ಯ ದಾಮೋದರ್ ಶಾಂತಿಗೋಡು, ಮಹಿಳಾ ಸಂಘಟನೆ ನಿರ್ದೇಶಕರಾಗಿ ಪ್ರಿಯಾಶ್ರೀ ಯೆಚ್, ವಿದ್ಯಾನಿಧಿ ನಿರ್ದೇಶಕರಾಗಿ ರವೀಂದ್ರ ಕಲ್ಕಾರ್ ಶಾಂತಿಗೋಡು, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಿಯಾಶ್ರೀ, ಸತೀಶ್, ಸುನಿಲ್ ಐ, ಹರೀಶ್ ಎಂ ಕೆ, ಭವಿತ್, ದೀಕ್ಷಿತ್ ಬಿ ಆರ್, ಶ್ರದ್ದಾ ಇವರುಗಳು ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಜರಿದ್ದರು.


ಬ್ರಹ್ಮಶ್ರೀ ಶ್ಲೋಕದೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಘಟಕದ ಅಧ್ಯಕ್ಷರಾದ ಉಮೇಶ್ ಬಾಯರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸಮಿತ್ ಪರ್ಪುಂಜ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಅಣ್ಣಿಪೂಜಾರಿ ವರದಿ ವಾಚಿಸಿ, ಧನ್ಯವಾದಗೈದರು.

LEAVE A REPLY

Please enter your comment!
Please enter your name here