ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಪೇರಲ್ತಡ್ಕ ಈಶ್ವರ ಎಂಬವರ ಮನೆಯ ದುರಸ್ತಿಗಾಗಿ ಮಾಡಿನ ಹಂಚನ್ನು ಡಿ.6ರಂದು ಶ್ರಮದಾನದ ಮೂಲಕ ತೆಗೆದು ಕೊಡಲಾಯಿತು.
![](https://puttur.suddinews.com/wp-content/uploads/2023/12/IMG-20231206-WA0087-1.jpg)
![](https://puttur.suddinews.com/wp-content/uploads/2023/12/IMG-20231206-WA0090.jpg)
ಈಶ್ವರ ಬಡ ಕುಟುಂಬದವರಾಗಿದ್ದು ಅವರ ಮನೆಯು ಮುರಿದು ಬೀಳುವ ಸ್ಥಿತಿಯಲ್ಲಿ ಇತ್ತು.ಇದನ್ನು ಮನಗಂಡ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾಡಿನ ಹಂಚು ತೆಗೆದು ಕೊಟ್ಟು ಸಹಕರಿಸಿದರು. ಘಟಕದ ಸದಸ್ಯರಾದ ಉಮೇಶ, ಸುಬ್ರಹ್ಮಣ್ಯ, ಹೇಮಾವತಿ ಸಿ.ಎಚ್, ಅಶೋಕ, ರವಿ ಕಟೀಲ್ತಡ್ಕ, ಸುಂದರ, ಹರಿಪ್ರಸಾದ್ ಎ ಬಿ, ಕೃಷ್ಣ, ದಿನೇಶ, ಗೀತಾ, ಪದ್ಮಾವತಿ.ಡಿ, ಮನೋಜ್ ಶ್ರಮದಾನದಲ್ಲಿ ಪಾಲ್ಗೊಂಡರು.