ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

0

ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ  ಪೇರಲ್ತಡ್ಕ ಈಶ್ವರ ಎಂಬವರ ಮನೆಯ ದುರಸ್ತಿಗಾಗಿ ಮಾಡಿನ ಹಂಚನ್ನು ಡಿ.6ರಂದು ಶ್ರಮದಾನದ ಮೂಲಕ ತೆಗೆದು ಕೊಡಲಾಯಿತು.

ಈಶ್ವರ ಬಡ ಕುಟುಂಬದವರಾಗಿದ್ದು ಅವರ ಮನೆಯು ಮುರಿದು ಬೀಳುವ ಸ್ಥಿತಿಯಲ್ಲಿ ಇತ್ತು.ಇದನ್ನು ಮನಗಂಡ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾಡಿನ ಹಂಚು ತೆಗೆದು ಕೊಟ್ಟು ಸಹಕರಿಸಿದರು. ಘಟಕದ ಸದಸ್ಯರಾದ ಉಮೇಶ, ಸುಬ್ರಹ್ಮಣ್ಯ, ಹೇಮಾವತಿ ಸಿ.ಎಚ್, ಅಶೋಕ, ರವಿ ಕಟೀಲ್ತಡ್ಕ, ಸುಂದರ, ಹರಿಪ್ರಸಾದ್ ಎ ಬಿ, ಕೃಷ್ಣ, ದಿನೇಶ, ಗೀತಾ, ಪದ್ಮಾವತಿ.ಡಿ, ಮನೋಜ್ ಶ್ರಮದಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here