ಯಕ್ಷಗಾನ ಕಲಾವಿದ ದಾಸಪ್ಪ ರೈ ಅವರಿಗೆ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೊರಿಯಲ್ ಅವಾರ್ಡ್

0

ಪುತ್ತೂರು: ಆತ್ಮಾಲಯ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥೆ ಡಾ.ಪದ್ಮಜ ಸುರೇಶ್ ನೇತೃತ್ವದಲ್ಲಿ ವಾರ್ಷಿಕವಾಗಿ ಪ್ರದಾನಮಾಡುವ 2023ರ ಶ್ರೀ ಶಾಂತ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಅವಾರ್ಡನ್ನು ತೆಂಕು ತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಸಂಘಟಕ ಯಚ್.ದಾಸಪ್ಪ ರೈ ಅವರಿಗೆ ಪ್ರದಾನ ಮಾಡಲಾಯಿತು. ಡಿ.9ರಂದು ಬೆಂಗಳೂರಿನ ಯವನಿಕ ಯುತ್ ಸೆಂಟ್ರಲ್, ನೃಪತುಂಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರೂ 3೦,೦೦೦ ನಗದಿನೊಂದಿಗೆ ದಾಸಪ್ಪ ರೈ ಅವರಿಗೆ ಪ್ರಶಸ್ತಿ ನೀಡಲಾಯಿತು. ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯರವರು ಅವರು ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.

LEAVE A REPLY

Please enter your comment!
Please enter your name here