ತಾಲೂಕು ವಾಲಿಬಾಲ್ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ಸತೀಶ್ ಕಟ್ಟಾವು, ಕಾರ್ಯದರ್ಶಿ ಬಾಬು ಎಂ, ಗೌರವಾಧ್ಯಕ್ಷ ವಿಜಯ ಹಾರ್ವಿನ್

ಪುತ್ತೂರು:ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಕಟ್ಟಾವು ವಾಯುಮಾಲಿನ್ಯ ಕೇಂದ್ರದ ಮ್ಹಾಲಕ ಸತೀಶ್ ರೈ ಕಟ್ಟಾವು, ಕಾರ್ಯದರ್ಶಿಯಾಗಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯಗುರು ಬಾಬು ಎಂ. ಈಶ್ವರಮಂಗಲ ಹಾಗೂ ಗೌರವಾಧ್ಯಕ್ಷರಾಗಿ ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ಪ ವಿಜಯ ಹಾರ್ವಿನ್ ಆಯ್ಕೆಯಾಗಿದ್ದಾರೆ.
ನೆಹರುನಗರದ ಸುದಾನ ವಸತಿಯುತ ಶಾಲಾ ಎಡ್ವರ್ಡ್ ಹಾಲ್‌ನಲ್ಲಿ ಡಿ.೯ರಂದು ನಡೆದ ಅಸೋಸಿಯೇಶನ್‌ನ ಸಮಾಲೋಚನಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವರಾಮ ಭಟ್ ಬೀರ್ನಕಜೆ, ಕೋಶಾಧಿಕಾರಿಯಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು, ಜತೆ ಕಾರ್ಯದರ್ಶಿಯಾಗಿ ದೊಡ್ಡಡ್ಕ ಮಹಾಲಿಂಗೇಶ್ಚರ ಸ್ಪ್ರೇ. ಪೈಂಟ್‌ನ ಮ್ಹಾಲಕ ಎಂ. ಸಂಜೀವ ಪೂಜಾರಿ, ರೆಫ್ರೀಬೋರ್ಡ್ ಚೀಫ್ ಆಗಿ ಪಟ್ಟೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ಸಂಚಾಲಕರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here