ರಾಜ್ಯಮಟ್ಟದ ಕಬ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಡೆಸಲ್ಪಟ್ಟ 2022-23ನೇ ಸಾಲಿನ ರಾಜ್ಯಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕ್ಷಾತ್ರ ಆರ್ ರೈ, ಜಿತೇಶ್, ಹಿತೇಶ್, ಹವನ್ ಸುವರ್ಣ, ವಿಖ್ಯಾತ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಾದ ಪ್ರಣತಿ ಬಂಗಾರಕೋಡಿ, ತನುಷ, ಗರಿಮಾ, ಸಾನ್ವಿ ಬಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಲೇಡಿ ಕಬ್ ಮಾಸ್ಟರ್ ವೀಣಾ ಕುಮಾರಿ ಮತ್ತು ಬುಲ್ ಬುಲ್ ಶಿಕ್ಷಕಿ ಸೌಮ್ಯಶ್ರೀ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here