ಡಿ.15,16: ಬುಡೇರಿಯಾ ಶಿರಾಡಿ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ, ವಾರ್ಷಿಕ ನರ್ತನೋತ್ಸವ

0

ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಡಿ.15,16ರಂದು ಧಾರ್ಮಿಕ ಕಾರ್ಯಕ್ರಮ, ಪಜ್ಜಡ್ಕ ಕಲ್ಕುಡ ಕಟ್ಟೆಯ ಸಮೀಪ ಕಾಲಾವಧಿಯ ಬುಡೇರಿಯಾ ಶ್ರೀ ಶಿರಾಡಿ ದೈವದ ನರ್ತನೋತ್ಸವ ನಡೆಯಲಿದೆ. ಬ್ರಹ್ಮಶ್ರೀ ವೇ.ಮೂ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ಬೆಳಿಗ್ಗೆ ಶಿರಾಡಿ ದೇವಸ್ಥಾನದಲ್ಲಿ ಗಣಹೋಮ,ಆಶ್ಲೇಷ ಬಲಿ,ದೈವಗಳಿಗೆ ಕಲಶಾಭಿಷೇಕ, ತಂಬಿಲ ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೆದಿಲದಲ್ಲಿ ಶಿರಾಡಿ ದೈವದ ಭಂಡಾರ ತೆಗೆದು ಅದೇ ಸಮಯಕ್ಕೆ ನರ್ತನೋತ್ಸವದ ಸ್ಥಳದಲ್ಲಿ ಕಲ್ಕುಡ,ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆದು ರಾತ್ರಿ ಭಜನಾ ಕಾರ್ಯಕ್ರಮ ನಡೆದು ಅನ್ನಪ್ರಸಾದ ನಡೆದು ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಹಾಗೂ ಚಾಮುಂಡಿ ದೈವಗಳ ನರ್ತನೋತ್ಸವ ನಡೆಯಲಿದೆ. ಡಿ.16ರಂದು ಬೆಳಿಗ್ಗೆ ಶಿರಾಡಿ ದೈವದ ನರ್ತನೋತ್ಸವ,ಅನ್ನಪ್ರಸಾದ ಬಲಿಯೊಂದಿಗೆ ಗಡಿ ಜಾಗಕ್ಕೆ ಪ್ರಯಾಣ ನಡೆಯಲಿದೆ. ದೈವ ಸಂಕಲ್ಪದಂತೆ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಅಗಮಿಸಿ ಶ್ರೀ ಮುಡಿ, ಗಂದಪ್ರಸಾದ ಸ್ವೀಕರಿಸಬೇಕಾಗಿ ಊರ ಹತ್ತು ಸಮಸ್ತರ ಪರವಾಗಿ
ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸ ಮಜಲು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here