ಪಾಪೆಮಜಲು ಬೇಂಗತಡ್ಕ ಬ್ರಹ್ಮ ಬೈದರ್ಕಳ ಗರಡಿಯ ಭೂಮಿ ಪೂಜೆ ಮತ್ತು ಶಿಲಾನ್ಯಾಸ

0

ಅರಿಯಡ್ಕ: ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪಾಪೆಮಜಲು- ಬೇಂಗತಡ್ಕ ಇದರ ನೂತನ ಗರಡಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಡಿ. 15 ರಂದು ಪುರೋಹಿತ ಪ್ರದೀಪ್ ಶಾಂತಿ ವೇಣೂರು, ಸಹ ಪುರೋಹಿತರಾದ ಹರೀಶ್ ಶಾಂತಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.ಆಡಳಿತ ಮೊಕ್ತೇಸರರಾದ ಕೇಶವ ಎಂ. ಎಸ್ ಶಾಂತಿವನ ಮತ್ತು ರತ್ನಾವತಿ ಕೇಶವ ದಂಪತಿಗಳು ಬ್ರಹ್ಮ ಬೈದರ್ಕಳ ಗರಡಿ ಮತ್ತು ಬ್ರಹ್ಮರ ಗುಂಡಕ್ಕೆ ಶಿಲಾಕಲ್ಲು ಇಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾದ ಉಮಾ ನಾಥ್ ಮಂಗಳೂರು, ಉಪಾಧ್ಯಕ್ಷರಾದ ಅಮ್ಮಣ್ಣ ರೈ ಡಿ ಪಾಪೆಮಜಲು, ಸಂತೋಷ್ ಕುಮಾರ್ ರೈ ಕೈಕಾರ, ಮತ್ತು ರಾಘವ ಪೂಜಾರಿ ಮರತ್ತಮೂಲೆ, ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕರುಣಾಕರ ಪೆರ್ವೊಡಿ, ಕೋಶಾಧಿಕಾರಿ ಕೃತಿಕಾ ಪೆರ್ವೊಡಿ, ಆಡಳಿತ ಮಂಡಳಿ ಸದಸ್ಯರಾದ ತುಳಸಿ ವಸಂತ್, ನಿತೀಶ್ ಕುಮಾರ್ ಶಾಂತಿವನ, ಪ್ರದೀಪ್ ಶಾಂತಿವನ, ಪುಷ್ಪಾ ರಾಜ್ ಶಾಂತಿವನ, ಸುಕುಮಾರ್ ಮಡ್ಯಂಗಳ, ಯೋಗೀಶ್ ಕುಶಾಲನಗರ, ಅಶೋಕ್ ಬೊಳ್ಳಾಡಿ, ಮತ್ತು ಕಾರ್ತಿಕ್ ಪೆರ್ವೊಡಿ, ಹಾಗೂ ಮೂಲೆ ಮಜಲು ದೋಲಾ ಗರಡಿಯ ಮೊಕ್ತೇಸರರಾದ ಕೃಷ್ಣಪ್ಪ ಪೂಜಾರಿ, ಒಟ್ಲಗರಡಿ ಶಿಶಿಲ ಇದರ ಮೊಕ್ತೇಸರರಾದ ಜನಾರ್ದನ ಬಂಗೇರ,ಅಗತ್ತಾಡಿ ಗರಡಿ ಮೊಕ್ತೇಸರರಾದ ಯಶವಂತ್ ಪೂಜಾರಿ, ಕಿಶೋರ್ ಕುಮಾರ್ ಬೊಟ್ಯಾಡಿ, ಚೆನ್ನಪ್ಪ ರೈ ದೇರ್ಲ,ರಾಜೀವ ರೈ ಕುತ್ಯಾಡಿ, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ,ಸುನೀಲ್ ಗುಂಡ್ಯಡ್ಕ, ಸಚಿನ್ ಪಾಪೆಮಜಲು,ನಾರಾಯಣ ಪೂಜಾರಿ ಮಡ್ಯಂಗಳ, ಸತೀಶ್ ಕುಮಾರ್ ಶಾಂತಿವನ, ಅಮ್ಮಣ್ಣ ರೈ ಪಿ.ಬಿ ಪಾಪೆಮಜಲು, ಕರುಣಾಕರ ಸುವರ್ಣ ಶಾಂತಿವನ, ಗಂಗಾಧರ ಸುವರ್ಣ ಶಾಂತಿವನ, ನಾರಾಯಣ ಪೂಜಾರಿ ಪಾಪೆಮಜಲು,ದೀಪು ಶಾಂತಿವನ,ಕುಂಞರಾಮ ಮಣಿಯಾಣಿ ಕುತ್ಯಾಡಿ, ಉಮೇಶ್ ಗೌಡ ಕನ್ನಯ,ಕೋಟಿ ಪೂಜಾರಿ, ದಿನೇಶ್ ‘ಕಾವೇರಿ ‘ಮಡ್ಯಂಗಳ, ಅಣ್ಣಪ್ಪ ನಾಯ್ಕ ಬೇಂಗತಡ್ಕ,ಐತ್ತಪ್ಪ ಮಣಿಯಾಣಿ ಕುತ್ಯಾಡಿ, ರಾಮಚಂದ್ರ ಗೌಡ ಬೇಂಗತಡ್ಕ, ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತಾ ಮರತ್ತಮೂಲೆ, ಶಿವಪ್ರಕಾಶ್ ಕೌಡಿಚ್ಚಾರು, ದಿನೇಶ್ ಮರತ್ತಮೂಲೆ, ಸಂತೋಷ್ ಕುಲಾಲ್ ಕೌಡಿಚ್ಚಾರು, ಇಂಜಿನಿಯರ್ ಸೋನು ಮಂಗಳೂರು, ಶಿಲ್ಪಿ ಜನಾರ್ದನ ಶಿಶಿಲ, ಮುಂತಾದ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here