ನಗರಸಭೆ ಉಪಚುನಾವಣೆ : ವಾರ್ಡ್ 11ರಲ್ಲಿ ಬಿಜೆಪಿ ಮನೆ ಮನೆ ಭೇಟಿ

0

ಪುತ್ತೂರು: ನಗರಸಭೆ ಉಪಚುನಾವಣೆಗೆ ಸಂಬಂಧಿಸಿ ವಾರ್ಡ್ 11 ನೆಲ್ಲಿಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಅವರ ಪರವಾಗಿ ಬಿಜೆಪಿಯಿಂದ ಮನೆ ಮನೆ ಭೇಟಿ ಮತಯಾಚನೆ ಆರಂಭಗೊಂಡಿದೆ.


ಪುಡಾ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಬೂತ್ ಅಧ್ಯಕ್ಷ ಗಣೇಶ್ ಕಾಮತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಮಮತಾ ರಂಜನ್, ಪೂರ್ಣಿಮಾ, ಸತೀಶ್ ನಾಯಕ್ ಪರ್ಲಡ್ಕ, ರೋಹಿತಾಕ್ಷ ನೆಲ್ಲಿಕಟ್ಟೆ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ನೆಲ್ಲಿಕಟ್ಟೆ ನಿವಾಸಿಗಳಾದ ಗೌತಮ್, ಉಲ್ಲಾಸ್ ಪೈ, ಶೇಖರ್ ಬ್ರಹ್ಮನಗರ, ಅಶೋಕ್ ಬ್ರಹ್ಮನಗರ, ಮೋಹನ್ ಮಡಿವಾಳ, ಸಂಕೇತ್ ಸಹಿತ ಹಲವಾರು ಮಂದಿ ಮನೆ ಮನೆ ಮತಯಾಚನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here