![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು ಘಟಕಕ್ಕೆ 2023ನೇ ಸಾಲಿನ “ಸಮಗ್ರ ಅತ್ಯುತ್ತಮ ಚಟುವಟಿಕೆ ಪ್ರಶಸ್ತಿ” ಹಾಗೂ ಅತ್ಯಂತ ಹೆಚ್ಚು “ಹೊಸ ಮೆಂಬರ್ಗಳನ್ನು ಶಾಖೆಗೆ ಸೇರಿಸಿದ ಪ್ರಶಸ್ತಿ” ಲಭಿಸಿದೆ.
![](https://puttur.suddinews.com/wp-content/uploads/2023/12/2-2.jpg)
ಮಂಗಳೂರಿನ ಅತ್ತಾವರದ ಕೆಎಂಸಿಯ ಮರೀನಾ ಬೇ ಸಭಾಂಗಣದಲ್ಲಿ ನಡೆದ 49ನೇ ಕರ್ನಾಟಕ ಸ್ಟೇಟ್ ಡೆಂಟಲ್ ಕಾನ್ಫರೆನ್ಸ್ ಹಾಗೂ 8ನೇ ಅಂತರಾಜ್ಯ ಕಾನ್ಫರೆನ್ಸ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಮ್.ಎಲ್. ಸುಧಾಕರ್ರವರು ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಡಾ.ಮುರಳೀಧರ್ ಭಟ್, ಕಾರ್ಯದರ್ಶಿ ಡಾ.ಕೀರ್ತನ್ ಕಜೆ, ರಾಜ್ಯ ಕಾರ್ಯನಿರ್ವಾಹಕ ಪ್ರತಿನಿಧಿ ಡಾ.ರಾಘವೇಂದ್ರ ಪಿದಮಲೆರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪುತ್ತೂರು ಘಟಕದ ಖಜಾಂಜಿ ಡಾ.ಚರಣ ಕಜೆ, ಡಾ.ಕೃಷ್ಣಪ್ರಸಾದ್, ಡಾ.ವಿಷು ಕುಮಾರ್ ಉಪಸ್ಥಿತರಿದ್ದರು.