ಕೊಳ್ತಿಗೆ ಬಿಜೆಪಿ ಶಕ್ತಿಕೇಂದ್ರದಿಂದ ಹಾಲು ಉ.ಸ.ಸಂಘದ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಕೆ

0

ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ ಶೆಟ್ಟಿ ಡಿ, ಉಪಾಧ್ಯಕ್ಷ ಬೆಳ್ಯಪ್ಪ ಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಕೊಳ್ತಿಗೆ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಸಂಚಾಲಕ ಸತೀಶ್ ಪಾಂಬಾರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ ಭಟ್ ಬೀರ್ಣಕಜೆ,ಮುಂದಿನ ದಿನಗಳಲ್ಲಿ ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಉತ್ತಮ ಸಂಘವಾಗಿ ತಾಲೂಕಿನಲ್ಲೇ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾಡ್ಯಪ್ಪ ಗೌಡ, ಶಿವರಾಮ ಕೆ, ಚಂದ್ರಾವತಿ, ಜಲಜಾಕ್ಷಿ, ಧನಂಜಯ ಭಂಡಾರಿ, ಗಣಪಯ್ಯ ನಾಯ್ಕ, ಕೆ.ತಿರುಮಲೇಶ್ವರ ಗೌಡ, ಕರುಣಾಕರ, ಎಸ್.ಮುರಳೀಕೃಷ್ಣ, ಸಿ.ಆರ್.ಸುಬ್ರಹ್ಮಣ್ಯ ಗೌಡ, ತೀರ್ಥಾನಂದ ದುಗ್ಗಳ, ಯತೀಂದ್ರ ಕೊಚ್ಚಿ, ಭಾಸ್ಕರ ರೈ, ವಸಂತ ಕುಮಾರ್ ರೈ, ಪ್ರಮೋದ್ ಕೆ.ಎಸ್, ಗಣಪತಿ ಭಟ್, ಸುಧೀರ್ ಕೆ.ಎಸ್, ಉದಯ ಕುಮಾರ್ ಜಿ.ಕೆ, ತಿಮ್ಮಪ್ಪ, ನಾಗವೇಣಿ, ಗಿರೀಶ್ ಪಾದೆಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಚಿತ್ರ: ಕೊಳ್ತಿಗೆ

LEAVE A REPLY

Please enter your comment!
Please enter your name here