ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿ ಸಭೆ

0

ಪುತ್ತೂರು: ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆಯು ಸದಸ್ಯ ನಿತಿನ್ ಪಕ್ಕಳರವರ ಗುಲಾಬಿ ಸದನದಲ್ಲಿ ಡಿ.21 ರಂದು ಜರಗಿತು.

ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ.ಜೆ ರೈ ಸ್ವಾಗತಿಸಿ ಸಭೆಯ ಉದ್ಧೇಶಗಳನ್ನು ಪ್ರಸ್ತಾಪಿಸಿದರು. ಕಾರ್ಯದರ್ಶಿ ಅಮ್ಮಣ್ಣಾಯರು ಕಳೆದ ಸಭೆಯ ನಿರ್ಣಯಗಳನ್ನು ತಿಳಿಸಿದರು. ಸಭೆಯಲ್ಲಿ ಜ.27 ರಂದು ಹಮ್ಮಿಕೊಳ್ಳುವ ಬಿರುಮಲೋತ್ಸವ-2024 ಕುರಿತು ವಿಚಾರ ವಿನಿಮಯ ನಡೆದು ಸಮಾರಂಭದ ವ್ಯವಸ್ಥಾಪಕ ಸುರೇಶ್ ರವರಿಗೆ ವಹಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೆ ಕಾರ್ಯಕ್ರಮದ ಕುರಿತು ಸೂಕ್ತ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ಹಂಚಲಾಯಿತು. ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನಾ ಸಮಿತಿಯ ಗೌರವಾಧ್ಯಕ್ಷ ಎ.ವಿ ನಾರಾಯಣರವರಿಗೆ ಬಿರುಮಲೋತ್ಸವ ಸಂದರ್ಭದಲ್ಲಿ ಸನ್ಮಾನಿಸುವುದೆಂದು ತೀರ್ಮಾನಿಸಲಾಯಿತು. ಸದಸ್ಯ ಸೂರ್ಯನಾಥ ಆಳ್ವ ಪ್ರಾರ್ಥಿಸಿದರು. ಪ್ರೊ|ದತ್ತಾತ್ರೇಯ ರಾವ್ ವಂದಿಸಿದರು. ಸದಸ್ಯರುಗಳಾದ ನಿತಿನ್ ಪಕ್ಕಳ, ಸುಭಾಷ್ ರೈ ಬೆಳ್ಳಿಪ್ಪಾಡಿ, ನೂಜಿಬೈಲು ಪ್ರಕಾಶ್ ರೈ, ಪ್ರೊ|ಝೇವಿಯರ್ ಡಿ’ಸೋಜ, ಡಾ.ಸತ್ಯವತಿ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here