ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ ಅಧ್ಯಕ್ಷರಾಗಿ ಅಬ್ದುಲ್ ಸಮದ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸೊರಕೆ ಆಯ್ಕೆ

0

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ 2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ದುಲ್ ಸಮದ್ ಬಿ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸೊರಕೆ(ದರ್ಬೆ) ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಅಂಙತ್ತಡ್ಕ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ದರ್ಬೆ ಹಾಗೂ ಅಬ್ದುಲ್ ಜಬ್ಬಾರ್ ಓಲೆಮುಂಡೋವು, ವರ್ಕಿಂಗ್ ಕಾರ್ಯದರ್ಶಿಯಾಗಿ ಸಮೀರ್ ಓಲೆಮುಂಡೋವು, ಜೊತೆ ಕಾರ್ಯದರ್ಶಿಗಳಾಗಿ ಹಾರೀಸ್ ಬೋಳೊಡಿ ಹಾಗೂ ಹಮ್ಸೀದ್ ಓಲೆಮುಂಡೋವು ಆಯ್ಕೆಯಾದರು. ಕ್ಲಸ್ಟರ್ ಕೌನ್ಸಿಲರುಗಳಾಗಿ ಇಸ್ಮಾಯಿಲ್ ಯಮಾನಿ, ಇಬ್ರಾಹಿಂ ಹಾಜಿ ದರ್ಬೆ, ಹಾರೀಸ್ ಬೋಳೋಡಿ, ಸಾಜೀದ್ ಓಲೆಮುಂಡೋವು, ಶಂಸುದ್ದೀನ್ ಓಲೆಮುಂಡೋವು, ಅಬ್ದುಲ್ ಹಮೀದ್ ದರ್ಬೆ ಆಯ್ಕೆಯಾದರು. ಇಬಾದ್ ಉಸ್ತುವಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಟಿ.ಎಸ್ ವಿಖಾಯ ಉಸ್ತುವಾರಿಯಾಗಿ ಅಬ್ದುಲ್ ಲತೀಫ್ ಓಲೆಮುಂಡೋವು, ಟ್ರೆಂಡ್ ಉಸ್ತುವಾರಿಯಾಗಿ ರಫೀಕ್ ಟಿ.ಎಂ, ಸರ್ಗಾಲಯ ಉಸ್ತುವಾರಿಯಾಗಿ ಸಾಜೀದ್ ಓಲೆಮುಂಡೋವು, ಕ್ಯಾಂಪಸ್ ಉಸ್ತುವಾರಿಯಾಗಿ ಅನ್ಸಾರ್ ಟಿ.ಎಸ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಬ್ಬಾರ್ ಅಂಙತ್ತಡ್ಕ, ಇಬ್ರಾಹಿಂ ಹಾಜಿ ದರ್ಬೆ ಆಯ್ಕೆಯಾದರು. ಆದಂ ದಾರಿಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಯಮಾನಿ ಸ್ವಾಗತಿಸಿದರು. ರಫೀಕ್ ಫೈಝಿ ಮಾಡನ್ನೂರು, ಸಿದ್ದೀಕ್ ಸುಲ್ತಾನ್ ಮತ್ತು ಎಸ್‌ಕೆಎಸ್‌ಎಸ್‌ಎಫ್ ವಲಯ ಐಟಿ ಕೋಆರ್ಡಿನೇಟರ್ ಮನ್ಸೂರ್ ಅಸ್ಲಮಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕುಂಬ್ರ ವಲಯ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here