![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಚರಂಡಿಗೆ ಅಳವಡಿಲಾದ ಕಾಂಕ್ರೀಟ್ ಸ್ಲಾಬ್ ತುಂಡಾಗಿ ಲಾರಿಯೊಂದರ ಚಕ್ರ ಚರಂಡಿಯಲ್ಲಿ ಸಿಲುಕಿಕೊಂಡು ರಸ್ತೆಗೆ ಅಡ್ಡವಾಗಿ ನಿಂತ ಘಟನೆ ಡಿ.29ರಂದು ಬೆಳಿಗ್ಗೆ ದರ್ಬೆಯಲ್ಲಿ ನಡೆದಿದೆ.
![](https://puttur.suddinews.com/wp-content/uploads/2023/12/5cc304c8-44f6-44b3-b077-521bbde6cb3e.jpg)
ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಂಭಾಗದ ಗೋದಾಮುಗೆ 14 ಚಕ್ರದ ಬೃಹತ್ ಲಾರಿಯಲ್ಲಿ ಸಕ್ಕರೆ ಹೊತ್ತು ತಂದಿತ್ತು. ಸಕ್ಕರೆ ಖಾಲಿ ಮಾಡಿ ಲಾರಿಯು ಮುಖ್ಯ ರಸ್ತೆಗೆ ಹಿಮ್ಮುಖವಾಗಿ ಚಲಿಸುವ ಸಂದರ್ಭದಲ್ಲಿ ಮುಂಭಾಗದ ಒಂದು ಚಕ್ರ ಸ್ಲಾಬ್ ತುಂಡಾಗಿ ಚರಂಡಿಯಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಲಾರಿಯು ರಸ್ತೆಗೆ ಅಡ್ಡವಾಗಿ ನಿಂತಿದೆ.