ಡಿ.31-ಜ.4: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ಇದರ 23ನೇ ವಾರ್ಷಿಕ ಮಹಾಸಂಗಮ

0

ರಾಮಕುಂಜ: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ತಿಂಗಳಿಗೊಮ್ಮೆ ನಡೆಸಿಕೊಂಡು ಬರುವ ಚರಿತ್ರೆ ಪ್ರಸಿದ್ಧ ಆತೂರು ದ್ಸಿಕ್ರ್ ಹಲ್ಕಾ ಇದರ 23ನೇ ವಾರ್ಷಿಕ ಮಹಾಸಂಗಮ ಡಿ.31ರಿಂದ ಜ.4ರ ತನಕ ನಡೆಯಲಿದೆ.


ಡಿ.31ರಂದು ಜಮಾಅತ್ ಅಧ್ಯಕ್ಷರಾದ ಯಚ್.ಅಹ್ಮದ್ ಕುಂಞಯವರ ಅಧ್ಯಕ್ಷತೆಯಲ್ಲಿ ಆತೂರು ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್‌ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅನಸ್ ಹಾದಿ ತಂಙಳ್ ಪ್ರಾರ್ಥನೆಗೆ ನೇತೃತ್ವ ವಹಿಸುವರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.1ರಂದು ಇರ್ಷಾದ್ ದಾರಿಮಿ ಅಲ್ ಜಝ್ಝರಿ ಮಿತ್ತಬೈಲ್ ಪ್ರಾರ್ಥನೆ ನೇತೃತ್ವ ವಹಿಸಲಿದ್ದು ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್ಹರಿ ಪಯ್ಯನ್ನೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.2ರಂದು ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಪ್ರಾರ್ಥನೆಯ ನೇತೃತ್ವ ವಹಿಸಲಿದ್ದು ಯಹ್ಯಾ ಬಾಖವಿ ಕಣ್ಣೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.೩ರಂದು ಬೆಳ್ತಂಗಡಿ ದಾರುಸ್ಸಲಾಂನ ಝೈನುಲ್ ಅಬಿದೀನ್ ಅಸ್ಸಯ್ಯಿದ್ ಜುನೈದ್ ಜಿಫ್ರಿ ತಂಙಳ್‌ರವರು ಪ್ರಾರ್ಥನೆಯ ನೇತೃತ್ವ ವಹಿಸಲಿದ್ದು ಆಶಿಕ್ ದಾರಿಮಿ ಆಲಪ್ಪುಝ ಕೇರಳ ಇವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.


ಜ.4ರಂದು ಸಮಾರೋಪ ನಡೆಯಲಿದ್ದು ಆತೂರು ಬಿಜೆಎಂನ ಗೌರವಾಧ್ಯಕ್ಷರಾದ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ದ.ಕ.ಜಿಲ್ಲೆ ಖಾಜಿ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ, ಅಸ್ಸಯ್ಯಿದ್ ಮುಹಮ್ಮದ್ ಹುಸೈನ್ ತಂಙಳ್ ಅಲ್ ಅಝ್‌ಹರಿ, ಪಟ್ಟಾಂಬಿ(ಕನ್ಕೂಲ್ ತಂಙಳ್), ಆತೂರು ಬಿಜೆಎಂ ಮುದರ್ರಿಸ್ ಅಸ್ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್‌ರವರು ಭಾಗವಹಿಸಲಿದ್ದಾರೆ. ಮಹಮ್ಮದ್ ಉಮ್ಮರ್ ದಾರಿಮಿ ಕಲ್ಲಿಕೋಟೆ ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಆತೂರು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಹೆಚ್.ಅಹ್ಮದ್ ಕುಂಞಿ, ಕಾರ್ಯದರ್ಶಿ ಸಿರಾಜ್ ಬಡ್ಡಮೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here