ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ತಾಳಮದ್ದಳೆ 

0

ಪುತ್ತೂರು: ಪುತ್ತೂರು -ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು  ತಂಡದ ತಾಳಮದ್ದಳೆ ” ಶಿವಭಕ್ತ ವೀರಮಣಿ” ನಡೆಯಿತು. 

ಹಿಮ್ಮೇಳದಲ್ಲಿ, ಭಾಗವತರಾಗಿ  ದೇವರಾಜ್ ಆಚಾರ್ಯ, ಐಕಳ, ಮದ್ದಳೆಯಲ್ಲಿ, ಯೋಗಿಶ್ ಆಚಾರ್ಯ, ಉಳೆಪಾಡಿ, ಚೆಂಡೆಯಲ್ಲಿ,ಅಶೋಕ್ ಆಚಾರ್ಯ ಉಳೆಪಾಡಿ  ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಹನುಮಂತ) ಜಯಲಕ್ಷ್ಮಿ ವಿ ಭಟ್(ವೀರಮಣಿ),ಶುಭಾ ಪಿ ಆಚಾರ್ಯ(ಶತ್ರುಘ್ನ), ಹೀರಾ ಉದಯ್ (ಈಶ್ವರ)ಪ್ರೇಮಾ ನೂರಿತ್ತಾಯ(ಶ್ರೀರಾಮ) ಭಾಗವಹಿಸಿದರು. ಪುರುಷೋತ್ತಮ ಆಚಾರ್ಯ ,ಪುತ್ತೂರು ಸಹಕರಿಸಿದರು. ಶ್ರೀ ಮಠದ ವತಿಯಿಂದ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here