ಕರ್ಕುಂಜ ನೆಲ್ಲಿಗುಂಡಿಯಲ್ಲಿ ಕ್ರೀಡಾಕೂಟ , ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು : ಶ್ರೀ ದೇವಿ ಕ್ರಿಕೆಟರ್ಸ್ ನೆಲ್ಲಿಗುಂಡಿ ಮತ್ತು ವಿ.ಪಿ.ಕ್ರಿಯೇಶನ್ ಪುತ್ತೂರು ಇದರ ಸಹಬಾಗಿತ್ವದಲ್ಲಿ ಡಿ. 31 ರಂದು ಮನೋರಂಜನಾ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕರ್ಕುಂಜ ನೆಲ್ಲಿಗುಂಡಿ ಕಾಲೋನಿಯಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಬೊಮ್ಮಣ್ಣ ನೆಲ್ಲಿಗುಂಡಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ , ಹಾರೈಸಿದರು.

ಅಧ್ಯಕ್ಷತೆಯನ್ನು ಮೋಹನ್ ನೆಲ್ಲಿಗುಂಡಿ ವಹಿಸಿದ್ದರು.ಶ್ರೀ ಮಾರಿಯಮ್ಮ ದೇವಸ್ಥಾನ ಬಪ್ಪಳಿಗೆ ಇದರ ಪ್ರದಾನ ಅರ್ಚಕರಾದ ಸಂಜೀವ ಮೇಸ್ತ್ರಿ, ಮತ್ತು ಭಾಸ್ಕರ ನೆಲ್ಲಿಗುಂಡಿ, ಪದ್ಮನಾಭ ದರ್ಖಾಸ್, ಸಂಜೀವ ನೆಲ್ಲಿಗುಂಡಿ, ವನಿತಾ ನೆಲ್ಲಿಗುಂಡಿ ಮತ್ತು ಮಧುಸೂದನ್ ನೆಲ್ಲಿಗುಂಡಿ ಉಪಸ್ಥಿತರಿದ್ದರು.
ನಂತರ ಹಲವು ರೀತಿಯ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು , ಸಾಧಕರನ್ನೂ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಆ ಬಳಿಕ ನೂತನ ವರುಷದ ಸಂಭ್ರಮಾಚರಣೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here