ಪುತ್ತೂರು ಎಸ್.ಆರ್.ಕೆ ಲ್ಯಾಡರ್ಸ್ ನ ಬೆಳ್ಳಿ ಹಬ್ಬದ ಸಂಭ್ರಮ – ಸುಳ್ಯ ಎಂ ಬಿ ಫೌಂಡೇಶನ್ ವಿಶೇಷ ಚೇತನ‌ ಶಾಲೆಗೆ ಕೊಡುಗೆ ಹಸ್ತಾಂತರ

0

ಪುತ್ತೂರು: ಪುತ್ತೂರು ಎಸ್.ಆರ್.ಕೆ ಲ್ಯಾಡರ್ಸ್ ನ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ವರ್ಷಪೂರ್ತಿ ಆಯೋಜನೆಗೊಂಡ ತಿಂಗಳ ಕಾರ್ಯಕ್ರಮದಲ್ಲಿ 2ನೇ ಕಾರ್ಯಕ್ರಮವಾಗಿ ಸುಳ್ಯದ ಎಂ.ಬಿ ಫೌಂಡೇಶನ್ ವಿಶೇಷ ಚೇತನ ಶಾಲೆಗೆ ಕೊಡುಗೆ ಹಸ್ತಾಂತರ ಮತ್ತು ಸಹಭೋಜನ ಕಾರ್ಯಕ್ರಮ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಸಹಭಾಗಿತ್ವದಲ್ಲಿ ಜ.1 ರಂದು ನಡೆಯಿತು.


ಎಸ್.ಆರ್.ಕೆ.‌ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರು ಸುಳ್ಯದ ಎಂ.ಬಿ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಎಮ್ ಬಿ. ಸದಾಶಿವ ಅವರಿಗೆ ರೂ.20 ಸಾವಿರವನ್ನು ಚೆಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭ ಸುಬ್ರಹ್ಮಣ್ಯ ಇನ್ನರ್ ವೀಲ್ ಅಧ್ಯಕ್ಷ ವೇದಾವತಿ ಶಿವರಾಮ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಎನೆಕಲ್, ಶಾಲಾ ಮುಖ್ಯಸ್ಥೆ ಹರಿಣಿ ಸದಾಶಿವ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶೃತಿ ಮಂಜುನಾಥ್ ಸಹಿತ ಸದಸ್ಯರು ಹಾಗೂ ಎಸ್ ಅರ್ ಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here