ಅಮ್ಚಿನಡ್ಕ: ಕಾರುಗಳೆರಡರ ಮಧ್ಯೆ ಅಪಘಾತ – ಮಹಿಳೆ ಸಹಿತ ಮೂವರಿಗೆ ಗಾಯ

0

ಮಾನವೀಯತೆ ಮೆರೆದ ತಾ.ಪಂ ಕೆಡಿಪಿ ಮಾಜಿ ಸದಸ್ಯ ಭಾಸ್ಕರ ರೈ ಕಂಟ್ರಮಜಲು

ಪುತ್ತೂರು: ಕಾರುಗಳೆರಡರ ನಡುವೆ ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅಮ್ಚಿನಡ್ಕದಲ್ಲಿ ಜ.1 ರಂದು ನಡೆದಿದೆ.
ಮಡಿಕೇರಿ ಕಡೆ ಹೋಗುತ್ತಿದ್ದ ಮಾರುತಿ ರಿಡ್ಜ್ ಕಾರು ಮತ್ತು ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಫಾರ್ಚ್ಯುನರ್ ಕಂಪೆನಿ ಕಾರು ನಡುವೆ ಅಮ್ಚಿನಡ್ಕದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಮಡಿಕೇರಿ ಕಡೆ ಹೋಗುತ್ತಿದ್ದ ರಿಡ್ಜ್ ಕಾರು ಪುತ್ತೂರು ಕಡೆ ಮುಖ ಮಾಡಿ ನಿಂತಿದೆ. ರಿಡ್ಜ್ ಕಾರಿನಲ್ಲಿದ್ದ ಮಹಿಳೆ ಮತ್ತು ಮೂವರು ಪುರುಷರಿಗೆ ಗಾಯವಾಗಿದ್ದು, ಅವರನ್ನು ತಾ.ಪಂ ಕೆಡಿಪಿ ಮಾಜಿ ನಾಮನಿರ್ದೇಶಿತ ಸದಸ್ಯ ಸ್ಥಳಿಯ ಭಾಸ್ಕರ್ ರೈ ಕಂಟ್ರಮಜಲು ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದು ಕೊಂಡು ಬಂದು ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here