ಜ.3:ನೆಹರು ನಗರದಲ್ಲಿ ಡಾ. ಅನುಜ್ ಶಂಕರ್ ರವರ “ನಗು ‘ ದಂತ ಚಿಕಿತ್ಸಾಲಯ ಶುಭಾರಂಭ

0

ಪುತ್ತೂರು : ಮಾಸ್ಟರ್ ಪ್ಲಾನರಿ ಮುಂಭಾಗದಲ್ಲಿರುವ ನಿಲ್ಕಮಲ್ ಸಂಕೀರ್ಣ ದಲ್ಲಿ ಜ.3 ರ ಬೆಳಗ್ಗೆ ” ನಗು” ದಂತ ಚಿಕಿತ್ಸಾಲಯ ಶುಭಾರಂಭಗೊಳ್ಳಲಿದೆ.ನೂತನ ಚಿಕಿತ್ಸಾಲಯದ ಉದ್ಘಾಟನೆಯನ್ನು , ಮಂಗಳೂರು ದೇರಳಕಟ್ಟೆ ಎ .ಬಿ. ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ ಇದರ ನಿವೃತ್ತ ಪ್ರಾಂಶುಪಾಲ ಹಾಗೂ ಡೀನ್ ಡಾ.ರಾಜೇಂದ್ರ ಪ್ರಸಾದ್ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ , ಶುಭಹಾರೈಸಲಿರುವವರಿದ್ದು , ಹಲವು ಅತಿಥಿಗಳು ಭಾಗವಹಿಸಲಿದ್ದಾರೆ.

ನೂತನ ಚಿಕಿತ್ಸಾಲಯದಲ್ಲಿ ದಂತ ಬೇರು ಚಿಕಿತ್ಸೆಯಲ್ಲಿ ಪರಿಣಿತ ವೈದ್ಯ ಡಾ. ಅನುಜ್ ಶಂಕರ್ ರೋಗಿಯ ನೈಸರ್ಗಿಕ ಹಲ್ಲನ್ನು ಉಳಿಸುವಲ್ಲಿ ನಿಪುಣರಾಗಿದ್ದು ,ದಂತ ಪರೀಕ್ಷೆ ಮತ್ತು ಎಕ್ಸರೇ ಸೇವೆ , ಹಲ್ಲಿನ ಬೇರು ಚಿಕಿತ್ಸೆ (RCT) , ಹಲ್ಲಿನ ಗುಳಿ ತುಂಬುವುದು ,ಹಲ್ಲು ಕೀಳುವುದು ,ವಕ್ರದಂತ ಚಿಕಿತ್ಸೆ (ಕ್ಲಿಪ್ ಹಾಕುವುದು) ,ಕೃತಕ ಹಲ್ಲು ಜೋಡಣೆ ,ಹಲ್ಲುಗಳನ್ನು ಬಿಳಿಯಾಗಿಸುವುದು ,ಹಲ್ಲು ಸ್ವಚ್ಛಗೊಳಿಸುವುದು , ಹಲ್ಲುಗಳಿಗೆ ಕ್ಯಾಪ್ ಮಾಡುವುದು ಹಾಗೂ ಹಲ್ಲಿನ ವಸಡು ಚಿಕಿತ್ಸೆ , ಹಲ್ಲಿನ ಇಂಪ್ಲಾಂಟ್ ಚಿಕಿತ್ಸೆ ಸೇವೆಯೆಲ್ಲಾವೂ ಶುಕ್ರವಾರ ಹೊರತುಪಡಿಸಿ , ಬೆಳಗ್ಗೆ 10 ರಿಂದ ರಾತ್ರಿ 7 ತನಕ ಲಭ್ಯವಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8660369372 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here