ಕೆಎಸ್‌ಟಿಎ ನಗರ ವಲಯ ಸಮಿತಿಯ ಸಾಮಾನ್ಯ ಸಭೆ

0

ಪುತ್ತೂರು: ಕೆಎಸ್‌ಟಿಎ ನಗರ ವಲಯ ಸಮಿತಿಯ ಮೂರನೆಯ ಸಾಮಾನ್ಯ ಸಭೆ ಡಿ.31ರಂದು ಅಧ್ಯಕ್ಷ ದಿನೇಶ್ ಸಂಪ್ಯರವರ ಅಧ್ಯಕ್ಷತೆಯಲ್ಲಿ ನಗರ ವಲಯದ ಸದಸ್ಯರಾದ ಸುಜಾತ ಮಂದಾರರವರ ಮಂದಾರ ಫ್ಯಾಷನ್ಸ್ ದರ್ಬೆ ಇಲ್ಲಿ ನಡೆಯಿತು. ನಗರ ವಲಯದ ಅಧ್ಯಕ್ಷ ದಿನೇಶ್ ಸಂಪ್ಯ ಸಭೆಯನ್ನು ಉದ್ದೇಶಿಸಿ ಎನ್‌ಪಿಎಸ್ ಮತ್ತು ಸಂಘಟನೆಯ ಬಗ್ಗೆ ಮಾತನಾಡಿದರು.

ರಾಜ್ಯ ಲೆಕ್ಕ ಪರಿಶೋಧಕರಾದ ರಘುನಾಥ್ ಬಿ ರವರು ಕೆಎಸ್‌ಟಿಎ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯುವ ಸಮಾವೇಶದ ಬಗ್ಗೆ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಲಹೆಗಳನ್ನು ನೀಡಿದರು. ಈ ಸಭೆಗೆ ನಗರ ವಲಯಕ್ಕೆ ಸಹಾಯಾರ್ಥವಾಗಿ ಹತ್ತು ಚೇರ್‌ಗಳನ್ನು ನೀಡಿದ ನಮೃತರವರಿಗೆ ವಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ನಗರ ವಲಯದ ಅಧ್ಯಕ್ಷ ದಿನೇಶ್ ಸಂಪ್ಯ, ರಾಜ್ಯ ಲೆಕ್ಕ ಪರಿಶೋಧಕರಾದ ರಘುನಾಥ್ ಬಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಜಯರಾಮ್ ಬಿಎನ್, ಕ್ಷೇತ್ರದ ಉಪಾಧ್ಯಕ್ಷ ಯಶೋಧರ್ ಜೈನ್, ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಪವಿತ್ರ ಎಂ ರೈ, ನಗರ ವಲಯದ ಕಾರ್ಯದರ್ಶಿ ಆಶಾ ಕಲ್ಲಾರೆ, ಕೋಶಾಧಿಕಾರಿ ಆರ್‌ಪಿ ಜಯದೇವ್ ಉಪಸ್ಥಿತರಿದ್ದರು. ಉಪ ಕಾರ್ಯದರ್ಶಿಗಳಾದ ಚಂದ್ರಿಕಾ ಎನ್, ಹರಿಣಿ ಡಿ ನವೀಕರಣ ಎಂ ಪಿ ಎಸ್ ಕಾರ್ಯಕ್ರಮ ನಡೆಸಿದರು. ವರ್ಷದ ಕೊನೆಯ ದಿನ ಹಾಗೂ ಹೊಸ ವರ್ಷದ ಶುಭ ಹಾರೈಕೆಯೊಂದಿಗೆ ಧನ್ಯವಾದ ಹಾಗೂ ಲಘು ಉಪಹಾರದೊಂದಿಗೆ ಸಭೆಯು ಮುಕ್ತಾಯಗೊಂಡಿತು. ಮೋಕ್ಷ ಪ್ರಾರ್ಥಿಸಿ, ಆಶಾ ಕಲ್ಲಾರೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here