ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ರಚನೆ

0

ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಕಿಂಡೋವು,ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬೊಳ್ಳಾವು

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಕಿಂಡೋವು ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬೊಳ್ಳಾವು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ನಿರ್ದೇಶಕರಾಗಿ ಜಗದೀಶ್ ರಾವ್ ಮಣಿಕ್ಕಳ, ಪ್ರಶಾಂತ್ ಯು. ಪೆರಿಯಡ್ಕ, ಬಾಲಚಂದ್ರ ಕೆ. ಕೊರಂಬಾಡಿ, ದೇರಣ್ಣ ಗೌಡ ಓಮಂದೂರು, ಧರ್ನಪ್ಪ ನಾಯ್ಕ ಬೊಳ್ಳಾವು, ವಿಶ್ವನಾಥ ಗೌಡ ಮಾಯಿತಾಲೂ, ಸೇಸಪ್ಪ ಗೌಡ ಬೊಳ್ಳಾವು, ವಸಂತ ಕೆ. ಕುಂಟಿನಿ, ಕೊರಗಪ್ಪ ಅಗರಿ, ಸುಮತಿ ಕೊರಂಬಾಡಿ, ವನಿತಾ ನೆಡ್ಚಿಲ್ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ ಜ.1ರಂದು ಚುನಾವಣೆ ಘೋಷಣೆಯಾಗಿತ್ತಾದರೂ, ಇಲ್ಲಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಮುಂದಿನ ಐದು ವರ್ಷಗಳ ಅವಧಿಗೆ ಈ ಆಡಳಿತ ಮಂಡಳಿ ಅಸ್ತಿತ್ವದಲ್ಲಿರುತ್ತದೆ.


ಸಂಘದ ಅಧ್ಯಕ್ಷರಾಗಿರುವ ಸದಾನಂದ ಶೆಟ್ಟಿ ಕಿಂಡೋವು ಅವರು ಪ್ರಗತಿಪರ ಕೃಷಿಕರಾಗಿದ್ದು, ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ, ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‌ನ ಟ್ರಸ್ಟಿಯಾಗಿ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಪಾಧ್ಯಕ್ಷರಾಗಿರುವ ಕೃಷ್ಣಪ್ಪ ಗೌಡ ಬೊಳ್ಳಾವು ಅವರು ಪೆರಿಯಡ್ಕ ಶಿಶು ಮಂದಿರ ಸಮಿತಿಯ ಸದಸ್ಯರಾಗಿದ್ದು, ವಿವಿಧ ಸಂಘ- ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.


LEAVE A REPLY

Please enter your comment!
Please enter your name here